ಜಮ್ಮು-ಕಾಶ್ಮೀರ ಹೈಕೋರ್ಟ್‌ಗೆ ಮೂವರು ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಶಿಫಾರಸು

Update: 2020-02-24 16:09 GMT

ಹೊಸದಿಲ್ಲಿ,ಫೆ.24: ವಿನೋದ ಚಟರ್ಜಿ ಕೌಲ್,ಸಂಜಯ ಧರ್ ಮತ್ತು ಪುನೀತ ಗುಪ್ತಾ ಅವರನ್ನು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕಗೊಳಿಸುವ ಪ್ರಸ್ತಾವಕ್ಕೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಒಪ್ಪಿಗೆ ನೀಡಿದೆ.

ಇತ್ತೀಚಿಗೆ ಸಭೆ ಸೇರಿದ್ದ ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆ ನೇತೃತ್ವದ ನೂತನ ಕೊಲಿಜಿಯಂ ಸತ್ಯಗೋಪಾಲ ಚಟ್ಟೋಪಾಧ್ಯಾಯ ಅವರನ್ನು ತ್ರಿಪುರಾ ಉಚ್ಚ ನ್ಯಾಯಾಲಯಕ್ಕೆ ಮತ್ತು ಎ.ಬಿ.ಸಿಂಗ್ ಅವರನ್ನು ಮಣಿಪುರ ಉಚ್ಚ ನ್ಯಾಯಾಲಯಕ್ಕೆ ನೇಮಕಗೊಳಿಸುವ ಪ್ರಸ್ತಾವಗಳನ್ನೂ ಶಿಫಾರಸು ಮಾಡಿದೆ.

ನ್ಯಾಯಮೂರ್ತಿಗಳಾದ ಎನ್.ವಿ.ರಮಣ,ಅರುಣ ಮಿಶ್ರಾ,ಆರ್.ಎಫ್.ನಾರಿಮನ್ ಮತ್ತು ಆರ್.ಭಾನುಮತಿ ಅವರು ಇತರ ಕೊಲಿಜಿಯಂ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News