'ನಿಮ್ಮೆಲ್ಲರ ಹಣ ಸುರಕ್ಷಿತವಾಗಿದೆ': ಆತಂಕದಲ್ಲಿರುವ ಯೆಸ್ ಬ್ಯಾಂಕ್ ಗ್ರಾಹಕರಿಗೆ ನಿರ್ಮಲಾ ಸೀತಾರಾಮನ್

Update: 2020-03-06 09:36 GMT

ಹೊಸದಿಲ್ಲಿ: "ನಿಮ್ಮೆಲ್ಲರ ಹಣ ಸುರಕ್ಷಿತವಾಗಿದೆಯೆಂದು ಪ್ರತಿಯೊಬ್ಬ ಠೇವಣಿದಾರನಿಗೆ ಭರವಸೆ ನೀಡುತ್ತೇನೆ'' ಎಂದು ಯೆಸ್ ಬ್ಯಾಂಕ್ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಹೇಳಿದ್ದಾರೆ.

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬ್ಯಾಂಕಿನ ಆಡಳಿತವನ್ನು ಆರ್‍ ಬಿಐ ವಹಿಸಿಕೊಂಡ ನಂತರ ಠೇವಣಿದಾರರಲ್ಲಿ ಮೂಡಿರುವ ಗೊಂದಲ ಹಾಗೂ ಭೀತಿಯ ವಾತಾವರಣವನ್ನು ಶಮನಗೊಳಿಸುವ ನಿಟ್ಟಿನಲ್ಲಿ ವಿತ್ತ ಸಚಿವೆಯ ಹೇಳಿಕೆ ಬಂದಿದೆ.

ಬ್ಯಾಂಕಿನ ಯಾವುದೇ ಠೇವಣಿದಾರ ಯಾವುದೇ ರೀತಿಯ ನಷ್ಟ ಅನುಭವಿಸುವುದಿಲ್ಲ ಎಂದು ಹೇಳಿದ ನಿರ್ಮಲಾ ಸೀತಾರಾಮನ್, "ಸಮಸ್ಯೆಯ ಕ್ಷಿಪ್ರ ಪರಿಹಾರ ಕೈಗೊಳ್ಳುವುದಾಗಿ ಆರ್‍ ಬಿಐ ಭರವಸೆ ನೀಡಿದೆ. ಎಲ್ಲರ ಹಣ ಸುರಕ್ಷಿತವಾಗಿದೆ. ಆರ್‍ ಬಿಐ ಜತೆ ನಾನು ನಿರಂತರ ಸಂಪರ್ಕದಲ್ಲಿದ್ದು, ಠೇವಣಿದಾರರ ಹಿತಾಸ್ಕತಿಯನ್ನು ಗಮನದಲ್ಲಿರಿಸಿ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಲಾಗುವುದು'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News