ಪಕ್ಷಕ್ಕೆ ಸೇರ್ಪಡೆಗೊಂಡ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂದಿಯಾಗೆ ರಾಜ್ಯಸಭೆಯ ಟಿಕೆಟ್ ನೀಡಿದ ಬಿಜೆಪಿ

Update: 2020-03-11 11:22 GMT

ಹೊಸದಿಲ್ಲಿ: ಪಕ್ಷಕ್ಕೆ ಸೇರ್ಪಡೆಗೊಂಡ ಕೆಲ ಗಂಟೆಗಳಲ್ಲೇ ಬಿಜೆಪಿಯು ಜ್ಯೋತಿರಾದಿತ್ಯ ಸಿಂದಿಯಾ ಅವರಿಗೆ ಬಿಜೆಪಿ ರಾಜ್ಯಸಭೆಯ ಟಿಕೆಟ್ ನೀಡಿದೆ. ಪಕ್ಷದ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಬಿಜೆಪಿಯು ಸಿಂದಿಯಾರನ್ನು ಹೆಸರಿಸಿದೆ.

ಕೆಲ ಗಂಟೆಗಳ ಹಿಂದಷ್ಟೇ ಜ್ಯೋತಿರಾದಿತ್ಯ ಸಿಂದಿಯಾ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

18 ವರ್ಷಗಳ ಬಳಿಕ ಸಿಂದಿಯಾ ಕಾಂಗ್ರೆಸ್ ನಿಂದ ನಿನ್ನೆ ಹೊರಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News