ಇದು ಪಟಾಕಿ ಸಿಡಿಸುವ ಸಮಯವಲ್ಲ: ಬಿಜೆಪಿ ಸಂಸದ ಗೌತಮ್ ಗಂಭೀರ್

Update: 2020-04-06 12:53 GMT

ಹೊಸದಿಲ್ಲಿ: ರವಿವಾರ ರಾತ್ರಿ 9 ಗಂಟೆಗೆ ಪಟಾಕಿ ಸಿಡಿಸಿರುವವರ ಬಗ್ಗೆ ಅಸಮಾದಾನ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್, 'ಮನೆಯಲ್ಲೇ ಇರಿ' ಎಂದು ವಿನಂತಿಸಿದ್ದಾರೆ.

ಒಗ್ಗಟ್ಟು ಪ್ರದರ್ಶನಕ್ಕೆ ಪ್ರಧಾನಿ ಕರೆ ನೀಡಿದ್ದರೆ, ಕೆಲವರು ಪಟಾಕಿಗಳನ್ನು ಸಿಡಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಗಂಭೀರ್, "ಮನೆಯೊಳಗೆ ಇರಿ, ನಾವು ಹೋರಾಟದ ಅರ್ಧದಲ್ಲಿದ್ದೇವೆ. ಇದು ಪಟಾಕಿ ಸಿಡಿಸುವ ಸಮಯವಲ್ಲ " ಎಂದು ಹೇಳಿದ್ದಾರೆ.

ಪಟಾಕಿ ಸಿಡಿಸಿ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಕ್ರಿಕೆಟಿಗ ಹರ್ಭಜನ್ ಸಿಂಗ್, "ನಾವು ಕೊರೋನಗೆ ಮದ್ದು ಕಂಡು ಹಿಡಿಯಬಹುದು. ಆದರೆ ಮೂರ್ಖತನಕ್ಕೆ ಮದ್ದನ್ನು ಕಂಡು ಹಿಡಿಯುವುದು ಹೇಗೆ?" ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News