‘ಜಿಹಾದ್ ಚಾರ್ಟ್’ ಕಾರ್ಯಕ್ರಮ : ಝೀ ನ್ಯೂಸ್ ನ ಸುಧೀರ್ ಚೌಧರಿ ವಿರುದ್ಧ ಎಫ್ ಐಆರ್ ದಾಖಲಿಸಿದ ಕೇರಳ ಪೊಲೀಸರು

Update: 2020-05-07 14:24 GMT

ಹೊಸದಿಲ್ಲಿ: ‘ಜಿಹಾದ್ ಚಾರ್ಟ್’ ಎನ್ನುವ ಕಾರ್ಯಕ್ರಮಕ್ಕಾಗಿ ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಕೇರಳ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

‘ಮಾರ್ಚ್ 11ರಂದು ಇಸ್ಲಾಂ ಧರ್ಮವನ್ನು ನಿಂದಿಸಿ ಕಾರ್ಯಕ್ರಮವೊಂದನ್ನು ನಡೆಸಿದ್ದಕ್ಕಾಗಿ’ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ‘ಜಿಹಾದ್ ಚಾರ್ಟ್’ ಎನ್ನುವ ಕಾರ್ಯಕ್ರಮವೊಂದನ್ನು ನಡೆಸಿದ್ದ ಸುಧೀರ್ ಚೌಧರಿ ಹಲವು ರೀತಿಯ ಜಿಹಾದ್ ಗಳಿವೆ ಎಂದು ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಧೀರ್ ಚೌಧರಿ ‘ಇದು ನನಗೆ ಸಿಕ್ಕ ಪುಲಿಟ್ಝರ್’ ಎಂದಿದ್ದಾರೆ.

“ಜಮ್ಮುವಿನಲ್ಲಿ ನಡೆಯುವ ಝಮೀನ್ ಜಿಹಾದ್, ಕೇರಳದಲ್ಲಿ ನಡೆಯುವ ಲವ್ ಜಿಹಾದ್ ಬಗ್ಗೆ ಮಾತನಾಡುವ ಧೈರ್ಯ ತೋರಿದ್ದಕ್ಕೆ ನಾನು ತೆರಬೇಕಾದ ಬೆಲೆ ಇದು. ಪಿಎಫ್ ಐ ಸಿಎಎ ಪ್ರತಿಭಟನಕಾರರಿಗೆ ಹಣ ನೀಡುತ್ತಿದೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News