ಉತ್ತರ ಪ್ರದೇಶ: ದಲಿತ ಯುವಕನ ತಲೆಕತ್ತರಿಸಿದ ದುಷ್ಕರ್ಮಿಗಳು

Update: 2020-05-18 14:53 GMT

ಫತೇಪುರ,ಮೇ 18: ಶಿರಚ್ಛೇದಗೊಂಡಿದ್ದ 22ರ ಹರೆಯದ ದಲಿತ ಯುವಕನೋರ್ವನ ಶವವು ಇಲ್ಲಿಯ ಚಕ್ಕಿ ಗ್ರಾಮದ ತೋಟವೊಂದರಲ್ಲಿ ಪತ್ತೆಯಾಗಿದ್ದು,ಮೃತನ ಬಲಗೈನ ಮೂರು ಬೆರಳುಗಳನ್ನೂ ಕತ್ತರಿಸಲಾಗಿದೆ ಎಂದು ಪೊಲೀಸರು ಸೋಮವಾರ ಇಲ್ಲಿ ತಿಳಿಸಿದರು. ಪ್ರಮೋದ್ ಕುಮಾರ್ ರವಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ತನ್ನ ತರಕಾರಿ ತೋಟಕ್ಕೆ ತೆರಳಿದ್ದ. ಅಪರಾಹ್ನ 2:30ರ ಸುಮಾರಿಗೆ ರುಂಡ ಕತ್ತರಿಸಲ್ಪಟ್ಟಿದ್ದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದ್ದು,ಆತನ ಮೊಬೈಲ್ ನಾಪತ್ತೆಯಾಗಿದೆ. ಸ್ಥಳದಲ್ಲಿ ರಕ್ತಸಿಕ್ತ ಇಟ್ಟಿಗೆ ಪತ್ತೆಯಾಗಿದ್ದು ಕುಮಾರನ ಕುತ್ತಿಗೆಯನ್ನು ಅದರ ಮೇಲಿರಿಸಿ ತುಂಡರಿಸಿರುವಂತಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಕುಮಾರನ ತಂದೆ ಆಗ್ರಾದಲ್ಲಿ ಶಾಲಾ ಶಿಕ್ಷಕರಾಗಿದ್ದು,ಲಾಕ್‌ಡೌನ್‌ನಿಂದಾಗಿ ಗ್ರಾಮದಲ್ಲಿಯೇ ಇದ್ದಾರೆ. ತಮಗೆ ಗ್ರಾಮದ ಯಾರೊಂದಿಗೂ ದ್ವೇಷವಿರಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದರು.

ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ವಿಚಾರಣೆಗಾಗಿ ಎಂಟು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೂರಕ್ಕಿಂತ ಹೆಚ್ಚು ಜನರು ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News