ನೇಪಾಳದ ವಿವಾದಿತ ಭೂಪಟ ಬೆಂಬಲಿಸಿ ಟ್ವೀಟ್ ಮಾಡಿದ ಮನೀಷಾ ಕೊಯಿರಾಲ: ಟ್ವಿಟರಿಗರ ಆಕ್ರೋಶ

Update: 2020-05-21 07:39 GMT

ಮುಂಬೈ: ವಿವಾದಿತ ಸ್ಥಳಗಳನ್ನು ಸೇರಿಸಿ ನೇಪಾಳ ಸರಕಾರ ಹೊರತಂದಿರುವ ಆ ದೇಶದ ಹೊಸ ಭೂಪಟವನ್ನು ಬೆಂಬಲಿಸಿ ಬಾಲಿವುಡ್ ನಟಿ ಮನೀಷಾ ಕೊಯಿರಾಲ ಅವರು ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

“ನಮ್ಮ ಸಣ್ಣ ದೇಶದ ಘನತೆಯನ್ನು ಕಾಪಾಡಿದ್ದಕ್ಕೆ ಧನ್ಯವಾದಗಳು. ಈಗ ನಾವು ಎಲ್ಲಾ ಮೂರು ಮಹಾನ್ ದೇಶಗಳ ಜತೆಗೆ ಶಾಂತಿಯುತ ಹಾಗೂ ಗೌರವುಯುತ ಮಾತುಕತೆಗಳಿಗೆ ಎದುರು ನೋಡುತ್ತಿದ್ದೇವೆ'' ಎಂದು ಆಕೆ ಬುಧವಾರ ಟ್ವೀಟ್ ಮಾಡಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಒಬ್ಬರು “ಮನೀಷಾ ನಿಮಗೆ ನಾಚಿಕೆ ಎಂಬುದಿಲ್ಲ.  ನೀವು ಭಾರತ ಬಿಟ್ಟು ಹೋಗುವುದು ಒಳ್ಳೆಯದು, ನಿಮಗೆ ನಾಚಿಕೆಯೆಂಬುದಿದ್ದರೆ ಮತ್ತೆ ಇಲ್ಲಿಗೆ ವಾಪಸ್ ಬರಬೇಡಿ. ಈ ಮೂರೂ ಜಾಗಗಳು ಭಾರತಕ್ಕೆ ಸೇರಿದ್ದು'' ಎಂದಿದ್ದಾರೆ.

“ಮನೀಷಾ ಕೊಯಿರಾಲ ಅವರ ಟ್ವೀಟ್‍ನಿಂದ ಆಘಾತ ಮತ್ತು ನೋವುಂಟಾಗಿದೆ.  ನಾನು ಆಕೆಯ ಬಹುಕಾಲದ ಅಭಿಮಾನಿ. ಆಕೆಯನ್ನು ಯಾವತ್ತೂ ಭಾರತೀಯ ನಟಿ ಎಂದು ತಿಳಿದುಕೊಂಡಿದ್ದೆ. ಭಾರತ ಯಾವತ್ತು ನೇಪಾಳವನ್ನು ಕೆಟ್ಟದಾಗಿ ನಡೆಸಿಕೊಂಡಿದೆ?, ಮೊದಲ ಬಾರಿಗೆ ನೇಪಾಳ ಕಾಲಾಪಾನಿ ತನ್ನದೆಂದು ಹೇಳುತ್ತಿರುವುದನ್ನು ಕೇಳುತ್ತಿದ್ದೇನೆ'' ಎಂದು  ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News