ಇನ್ನಷ್ಟು ರೈಲುಗಳ ಸಂಚಾರ ಪುನರಾರಂಭ: ಪಿಯೂಷ್ ಗೋಯಲ್

Update: 2020-05-21 17:57 GMT

ಹೊಸದಿಲ್ಲಿ, ಮೇ 21: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹಲವು ವಾರಗಳ ಲಾಕ್‌ಡೌನ್ ಬಳಿಕ ಇದೀಗ ದೇಶವನ್ನು ಸಹಜ ಸ್ಥಿತಿಯತ್ತ ಸಾಗಿಸುವ ಅಗತ್ಯವಿದೆ. ಆದ್ದರಿಂದ ಶೀಘ್ರದಲ್ಲೇ ಇನ್ನಷ್ಟು ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.

ಇನ್ನಷ್ಟು ರೈಲುಗಳ ಸಂಚಾರದ ಬಗ್ಗೆ ಶೀಘ್ರ ಘೋಷಿಸಲಾಗುವುದು. ದೇಶವನ್ನು ಸಹಜತೆಯತ್ತ ಕೊಂಡೊಯ್ಯುವ ಸಮಯ ಬಂದಿದೆ ಎಂದು ಗೋಯಲ್ ಹೇಳಿದ್ದಾರೆ.

ಮುಂದಿನ ಎರಡು ಮೂರು ದಿನಗಳಲ್ಲಿ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಬುಕಿಂಗ್ ಆರಂಭಿಸಲಾಗುವುದು. ಬುಕಿಂಗ್ ಮಾಡಬಹುದಾದ ಸ್ಟೇಷನ್‌ಗಳನ್ನು ಗುರುತಿಸಿ ಅಲ್ಲಿ ಟಿಕೆಟ್ ಕೌಂಟರ್‌ಗಳನ್ನು ಆರಂಭಿಸುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News