ವಿಮಾನಗಳ ಮೂಲಕ ಕಾರ್ಮಿಕರನ್ನು ಕಳುಹಿಸಿಕೊಡಲು ಎಎಪಿ ಸಂಸದ ಸಂಜಯ್ ಸಿಂಗ್ ನಿರ್ಧಾರ

Update: 2020-06-03 09:06 GMT

ಹೊಸದಿಲ್ಲಿ, ಜೂ.3: ಸಂಸದನ ಕೋಟಾದಲ್ಲಿ ತನ್ನ ಬಳಿ ಇರುವ ವಿಮಾನದ ಟಿಕೆಟ್‌ಗಳ ಮೂಲಕ ವಲಸೆ ಕಾರ್ಮಿಕರನ್ನು ದಿಲ್ಲಿಯಿಂದ ಪಾಟ್ನಾದಲ್ಲಿರುವ ಅವರ ಊರಿಗೆ ತಲುಪಿಸುತ್ತೇನೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.

ನಾನು ಎರಡು ವಿಮಾನಗಳ ಮೂಲಕ ವಲಸಿಗ ಕಾರ್ಮಿಕರನ್ನು ನಾಳೆ ದಿಲ್ಲಿಯಿಂದ ಪಾಟ್ನಾಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದೇನೆ. ಸಂಸದನಾಗಿ ಒಂದು ವರ್ಷದಲ್ಲಿ ನಾನು ಸ್ವೀಕರಿಸಿರುವ 34 ವಿಮಾನದ ಟಿಕೆಟ್‌ಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿರುವೆ. ಇದಕ್ಕೆ ಸಹೋದ್ಯೋಗಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ನೆರವಾಗುತ್ತಿವೆ ಎಂದು ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಸಂಸದರಾದವರು ದೇಶೀಯ ವಿಮಾನಗಳಲ್ಲಿ ವರ್ಷಕ್ಕೆ 34 ಬ್ಯುಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಪಡೆಯಲು ಅರ್ಹರಿದ್ದಾರೆ. ಸಂಜಯ ಸಿಂಗ್ ಅವರ ನಿರ್ಧಾರವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶಂಸಿಸಿದರು. ಇದು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News