ಸುಶಾಂತ್ ಸಿಂಗ್ ಅಭಿಮಾನಿಗಳೊಂದಿಗೆ ನಿಲ್ಲುವಂತೆ ತನ್ನ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಕರೆ

Update: 2020-06-21 08:29 GMT

ಹೊಸದಿಲ್ಲಿ: ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ನಂತರ ಬಾಲಿವುಡ್ ಚಿತ್ರೋದ್ಯಮದಲ್ಲಿ ಸ್ವಜನಪಕ್ಷಪಾತ ವ್ಯಾಪಕವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಸ್ಟಾರ್ ಗಳ ಮಕ್ಕಳು, ಕುಟುಂಬಸ್ಥರಿಗೆ ಮಾತ್ರ ಬೆಂಬಲ ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಆಕ್ರೋಶಕ್ಕೆ ಗುರಿಯಾದ ಖ್ಯಾತ ತಾರೆಯರಲ್ಲಿ ಸಲ್ಮಾನ್ ಖಾನ್ ಅವರ ಹೆಸರೂ ಸೇರಿದೆ.

ಈ ಮಧ್ಯೆ ರವಿವಾರ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, ಸುಶಾಂತ್ ಸಿಂಗ್ ಅವರ ಅಭಿಮಾನಿಗಳ ಪರವಾಗಿ ನಿಲ್ಲುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಸುಶಾಂತ್ ಅಭಿಮಾನಿಗಳು ಬಳಸಿದ ಭಾಷೆಯಿಂದ ಸಿಟ್ಟಾಗದಂತೆ ಮನವಿ ಮಾಡಿದ್ದಾರೆ.

“ಎಲ್ಲ ಅಭಿಮಾನಿಗಳು ಸುಶಾಂತ್ ಅಭಿಮಾನಿಗಳ ಪರವಾಗಿ ನಿಲ್ಲಬೇಕು. ಅವರು ಬಳಸಿದ ಭಾಷೆ ಅಥವಾ ನಿಂದನೆಯಿಂದ ಆಕ್ರೋಶಗೊಳ್ಳಬೇಡಿ. ಅದರ ಹಿಂದಿರುವ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಬೆಂಬಲಿಸಿ ಹಾಗೂ ಅವರ ಕುಟುಂಬ, ಅಭಿಮಾನಿಗಳ ಪರವಾಗಿ ನಿಲ್ಲಿ. ಪ್ರೀತಿಪಾತ್ರರಾದ ಸುಶಾಂತ್ ಅವರ ಸಾವು ತೀವ್ರ ಖೇದಕರ”ಎಂದು ಟ್ವಿಟರ್‍ ನಲ್ಲಿ ಸಲ್ಮಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News