ಬಂಡಾಯ ಶಾಸಕರಿರುವ ರೆಸಾರ್ಟ್ ಗೆ ತೆರಳದಂತೆ ರಾಜಸ್ಥಾನ ಪೊಲೀಸರನ್ನು ತಡೆದ ಹರ್ಯಾಣ ಪೊಲೀಸರು
Update: 2020-07-17 14:12 GMT
ಜೈಪುರ: ರಾಜಸ್ಥಾನದ 18 ಬಂಡಾಯ ಶಾಸಕರಿರುವ ಮನೇಸರ್ ರೆಸಾರ್ಟ್ ಗೆ ತೆರಳದಂತೆ ರಾಜಸ್ಥಾನ ಪೊಲೀಸರನ್ನು ಹರ್ಯಾಣ ಪೊಲೀಸರು ತಡೆದಿದ್ದಾರೆ.
ರಾಜಸ್ಥಾನ ಸರಕಾರವನ್ನು ಉರುಳಿಸಲು ಪಿತೂರಿ ನಡೆಸಲಾಗಿತ್ತು ಎನ್ನಲಾದ ಆಡಿಯೋವೊಂದು ವೈರಲ್ ಆದ ಬಳಿಕ ಇದಕ್ಕೆ ಸಂಬಂಧಿಸಿ ಭನ್ವರ್ ಲಾಲ್ ಶರ್ಮಾರ ವಿಚಾರಣೆಗೆ ರಾಜಸ್ಥಾನ ಪೊಲೀಸರು ತೆರಳಿದ್ದರು.
ಬಿಜೆಪಿಯೊಂದಿಗೆ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಸಂಚು ನಡೆಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ನಂತರ ಈ ಇಬ್ಬರು ಶಾಸಕರನ್ನು ವಜಾಗೊಳಿಸಿತ್ತು.
ಈ ಕುರಿತು ಎಫ್ ಐಆರ್ ದಾಖಲಾದ ಬಳಿಕ ರಾಜಸ್ಥಾನ ಪೊಲೀಸರು ರೆಸಾರ್ಟ್ ಗೆ ತೆರಳಿದ್ದರು. ಆದರೆ ರೆಸಾರ್ಟ್ ಗೆ 5 ಕಿ.ಮೀ.ಗಳಿರುವಾಗ ಹರ್ಯಾಣ ಪೊಲೀಸರು ಅವರನ್ನು ತಡೆದಿದ್ದಾರೆ.