ಸುಶಾಂತ್ ಕುರಿತ ಹೇಳಿಕೆಗಳನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಪದ್ಮಶ್ರೀ ವಾಪಸ್ ನೀಡುತ್ತೇನೆ: ಕಂಗನಾ

Update: 2020-07-18 12:15 GMT

ಚಂಡೀಗಢ : ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕುರಿತಂತೆ ತಾನು ನೀಡಿದ ಹೇಳಿಕೆಗಳನ್ನು ಸಮರ್ಥಿಸಲು ಸಾಧ್ಯವಾಗದೇ ಇದ್ದಲ್ಲಿ ತನಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುವುದಾಗಿ ನಟಿ ಕಂಗನಾ ರಾಣವತ್ ಹೇಳಿದ್ದಾರೆ.

 ಬಾಲಿವುಡ್‍ನ ಹಲವು ಮಂದಿ ಸ್ವಜನಪಕ್ಷಪಾತ ನಡೆಸುತ್ತಿರುವ ಕುರಿತಂತೆ ಆರೋಪಿಸಿ ಕಂಗನಾ ಹಲವಾರು  ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

ಬಾಲಿವುಡ್‍ನಲ್ಲಿ ಸುಶಾಂತ್ ಎದುರಿಸಿದ್ದ ಒತ್ತಡಗಳು ಹಾಗೂ ನಿರಾಕರಣೆಗಳ ಕುರಿತಂತೆಯೂ ಕಂಗನಾ ಹೇಳಿಕೊಂಡಿದ್ದರಲ್ಲದೆ  ಸುಶಾಂತ್ ಅವರದ್ದು ಆತ್ಮಹತ್ಯೆಯೇ ಅಥವಾ ಯೋಜಿತ ಹತ್ಯೆಯೇ ಎಂದೂ ಆಕೆ ಪ್ರಶ್ನಿಸಿದ್ದರು.

``ಮುಂಬೈ ಪೊಲೀಸರು ನನಗೆ ಸಮನ್ಸ್ ಕಳುಹಿಸಿದ್ದರು.  ಅದಕ್ಕೆ ನಾನು ಮನಾಲಿಯಲ್ಲಿದ್ದೇನೆ, ನನ್ನ ಹೇಳಿಕೆ ಪಡೆಯಲು ಯಾರನ್ನಾದರೂ ಕಳುಹಿಸಿ ಎಂದೆ, ಆದರೆ ನಂತರ ಅವರಿಂದ ಮಾಹಿತಿಯಿಲ್ಲ. ನಾನು ನಿಮಗೆ ಹೇಳುತ್ತಿದ್ದೇನೆ, ನಾನೇನಾದರೂ ಹೇಳಿದ್ದರೆ ಹಾಗೂ ಅದನ್ನು ಸಾಬೀತು ಪಡಿಸಲು ನನಗೆ ಸಾಧ್ಯವಾಗದೇ ಇದ್ದರೆ, ನನ್ನ ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡುತ್ತೇನೆ,'' ಎಂದು ಕಂಗನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News