ಶರಣಾಗು, ಇಲ್ಲದೇ ಹೋದರೆ ನಿನ್ನ ಹಾಗೂ ನಿನ್ನ ಕುಟುಂಬದ ಹತ್ಯೆ ನಡೆಯಬಹುದು:ಕಿರಿಯ ಪುತ್ರನಿಗೆ ವಿಕಾಸ್ ದುಬೆ ತಾಯಿಯ ಮನವಿ

Update: 2020-07-22 09:53 GMT

ಹೊಸದಿಲ್ಲಿ: ಇತ್ತೀಚೆಗೆ ಕಾನ್ಪುರ್ ನಲ್ಲಿ ಎಂಟು ಮಂದಿ ಪೊಲೀಸರ ಹತ್ಯೆಗೆ ಕಾರಣನಾದ ಹಾಗೂ ಬಂಧಿಸಲ್ಪಟ್ಟ ನಂತರ ತಪ್ಪಿಸಿಕೊಳ್ಳುವ ಯತ್ನದಲ್ಲಿ ಪೊಲೀಸ್ ಎನ್‍ಕೌಂಟರ್ ಬಲಿಯಾದ ಕುಖ್ಯಾತ ಕ್ರಿಮಿನಲ್ ವಿಕಾಸ್ ದುಬೆಯ ತಾಯಿ ತನ್ನ ಕಿರಿಯ ಪುತ್ರನಿಗೆ ಶರಣಾಗುವಂತೆ ಮನವಿ  ಮಾಡಿದ್ದಾರೆ.  

"ದೀಪ್ ಪ್ರಕಾಶ್ ದಯವಿಟ್ಟು ಬಂದು ಶರಣಾಗು, ಇಲ್ಲದೇ ಇದ್ದರೆ ಪೊಲೀಸರು ನಿನ್ನನ್ನು ಹಾಗೂ ನಿನ್ನ ಕುಟುಂಬವನ್ನು ಹತ್ಯೆ ಮಾಡುತ್ತಾರೆ,'' ಎಂದು ಅವರು ಹೇಳಿದ್ದಾರೆ.

"ನೀನು ಏನೂ ಮಾಡಿಲ್ಲ, ನಿನಗೆ ಪೊಲೀಸರ ರಕ್ಷಣೆ ದೊರೆಯುತ್ತದೆ. ನಿನ್ನ ಸೋದರನ ಜತೆಗಿನ ನಂಟಿನ ಕಾರಣಕ್ಕೆ ತಲೆಮರೆಸಿಕೊಳ್ಳಬೇಡ,'' ಎಂದು ಸರಳಾ ದೇವಿ ತಮ್ಮ ಕಿರಿಯ ಪುತ್ರನಿಗೆ ಮನವಿ ಮಾಡಿದ್ದಾರೆ.

ಹಿರಿಯ ಪುತ್ರ ವಿಕಾಸ್ ದುಬೆಯನ್ನು ಪೊಲಿಸರು ಎನ್‍ಕೌಂಟರ್ ನಲ್ಲಿ ಸಾಯಿಸಿದ ಕೆಲವೇ ದಿನಗಳಲ್ಲಿ ಆಕೆ ತನ್ನ ಕಿರಿಯ ಪುತ್ರ ದೀಪ್ ಪ್ರಕಾಶ್ ದುಬೆಗೆ ಮೇಲಿನ ಸಲಹೆ  ನೀಡಿದ್ದಾರೆ. ವಿಕಾಸ್ ದುಬೆಯ ಅಂತ್ಯಕ್ರಿಯೆಯಲ್ಲೂ ಭಾಗವಹಿಸದೇ ಇದ್ದ ಆತನ ತಾಯಿ ತನಗೂ ಆತನಿಗೂ ಸಂಬಂಧವಿಲ್ಲ ಎಂದು ಹೇಳಿದ್ದರು.

ದೀಪ್ ಪ್ರಕಾಶ್  ಸದ್ಯ ತಲೆಮರೆಸಿಕೊಂಡಿದ್ದು ಜುಲೈ 3ರಂದು ಬಿಕ್ರು ಗ್ರಾಮದಲ್ಲಿ ನಡೆದ ಘಟನೆಯ ಬಳಿಕ ಆತ ಬಂಧನಕ್ಕೆ ಬೆದರಿ ಭೂಗತನಾಗಿದ್ದಾನೆಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News