ಆತ್ಮಹತ್ಯೆಗೆ ಯತ್ನಿಸಿದ ಬಹುಭಾಷಾ ನಟಿ ವಿಜಯಲಕ್ಷ್ಮೀ: ಆಸ್ಪತ್ರೆಗೆ ದಾಖಲು

Update: 2020-07-26 16:31 GMT

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ನಿಂದನೆಗಳು ಕೇಳಿ ಬರುತ್ತಿದ್ದು, ಕೆಲವರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಹುಭಾಷಾ ನಟಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮಹತ್ಯೆ ಯತ್ನಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿರುವ ಅವರು, ನಾಮ್ ತಮಿಳರ್ ಪಕ್ಷದ ನಾಯಕ ಸೀಮಾನ್ ಮತ್ತು ಹರಿ ನಾಡರ್ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಡಿಯೋದಲ್ಲಿ ಅವರು, ತಾನು ಮಾತ್ರೆಗಳನ್ನು ಸೇವಿಸಿದ್ದು, ಸಾಯಲಿದ್ದೇನೆ ಎಂದಿದ್ದಾರೆ.

https://www.facebook.com/profile.php?id=100043427213541

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News