ಮಂದಿರ ಶಿಲಾನ್ಯಾಸವು ಭಾರತದ ಸಾಮಾಜಿಕ ಸೌಹಾರ್ದವನ್ನು ಬಿಂಬಿಸಿದೆ: ರಾಷ್ಟ್ರಪತಿ ಕೋವಿಂದ್

Update: 2020-08-05 15:28 GMT

ಹೊಸದಿಲ್ಲಿ,ಆ.5: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶದ ಜನತೆಯನ್ನು ಅಭಿನಂದಿಸಿ ಟ್ವೀಟಿಸಿದ್ದಾರೆ.

 ‘ಕಾನೂನಿಗನುಗುಣವಾಗಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರವು ಭಾರತದ ಸಾಮಾಜಿಕ ಸೌಹಾರ್ದ ಮತ್ತು ಜನತೆಯ ಉತ್ಸಾಹದ ಪ್ರತೀಕವಾಗಿದೆ. ಅದು ರಾಮರಾಜ್ಯದ ಆದರ್ಶಗಳಿಗೆ ಸಾಕ್ಷಿಯಾಗಲಿದೆ ಮತ್ತು ಆಧುನಿಕ ಭಾರತದ ಸಂಕೇತವಾಗಲಿದೆ ’ ಎಂದು ಕೋವಿಂದ್ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News