‘ಕೊರೋನ ನಿವಾರಣೆಗೆ’ ಕೆಸರಿನಲ್ಲಿ ಕುಳಿತು ಶಂಖ ಊದಿದ ಬಿಜೆಪಿ ಸಂಸದ !

Update: 2020-08-15 18:21 GMT

ಹೊಸದಿಲ್ಲಿ, ಆ. 15: ಕೊರೋನ ಸೋಂಕನ್ನು ಗುಣಪಡಿಸಲು ಜಗತ್ತಿನಾದ್ಯಂತದ ವಿಜ್ಞಾನಿಗಳ ಸಮೂಹ ಪ್ರಯತ್ನಿಸುತ್ತಿರುವ ನಡುವೆ ಕೊರೋನ ಸೋಂಕಿಗೆ ವಿಲಕ್ಷಣ ಸಲಹೆ ನೀಡುತ್ತಿರುವವರ ಪಟ್ಟಿಯಲ್ಲಿ ರಾಜಸ್ಥಾನದ ಬಿಜೆಪಿ ಸಂಸದ ಸುಖ್‌ಬೀರ್ ಸಿಂಗ್ ಜೌನಪುರಿಯ ಸೇರಿದ್ದಾರೆ.

ಕೆಸರಿನಲ್ಲಿ ಕುಳಿತು, ಮಣ್ಣಿನ ಲೇಪ ಮಾಡಿಕೊಂಡು ಶಂಖ ಊದುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಕೊರೋನ ವೈರಸ್ ವಿರುದ್ಧ ಹೋರಾಡಲು ನೆರವಾಗುತ್ತದೆ ಎಂದು ಬಿಜೆಪಿ ಸಂಸದ ಸುಖ್‌ಬೀರ್ ಸಿಂಗ್ ಜೌನಪುರಿಯ ಹೇಳಿದ್ದಾರೆ.

ಕೊರೋನ ಗುಣಪಡಿಸಲು ರಾಜಕಾರಣಿಗಳು ಇಂತಹ ವಿಲಕ್ಷಣ ಹಾಗೂ ಅವೈಜ್ಞಾನಿಕ ಸಲಹೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ.

ಈ ಹಿಂದೆ ಕೇಂದ್ರ ಸಚಿವ ಅರುಣ್ ರಾಮ್ ವೇಘಾವಲ್ ಅವರು ಕೊರೋನ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಪ್ಪಳ ತಿನ್ನಿ ಎಂದು ಹೇಳಿರುವ ವೀಡಿಯೊ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News