ಭಾರತ-ಬಾಂಗ್ಲಾ ಗಡಿಯಲ್ಲಿ ಕಳ್ಳಸಾಗಣೆದಾರ ಬಿಎಸ್‌ಎಫ್ ಗುಂಡಿಗೆ ಬಲಿ

Update: 2020-09-06 14:15 GMT

ಕೋಲ್ಕತಾ,ಸೆ.6: ಪಶ್ಚಿಮ ಬಂಗಾಳದಲ್ಲಿ ಭಾರತ-ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯಲ್ಲಿ ಶನಿವಾರ ಸಂಜೆ ಬಾಂಗ್ಲಾದೇಶಿ ಕಳ್ಳಸಾಗಣೆದಾರನೋರ್ವನಿಗೆ ಬಿಎಸ್‌ಎಫ್ ಸಿಬ್ಬಂದಿ ಗುಂಡಿಕ್ಕಿದ್ದಾರೆ.

ಮಾಲ್ಡಾ ಜಿಲ್ಲೆಯ ಗೋಪಾಲಪುರ ಗಡಿ ಠಾಣೆಯ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.

ಮೃತ ವ್ಯಕ್ತಿ ಫೆನ್ಸಿಡಿಲ್ ಕೆಮ್ಮಿನ ಸಿರಪ್‌ನ್ನು ಕಳ್ಳಸಾಗಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದು,ಆತನ ಬಳಿಯಲ್ಲಿದ್ದ ಸಿರಪ್‌ನ ಕನಿಷ್ಠ 75 ಬಾಟಲ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದರು.

ಬಾಂಗ್ಲಾದೇಶದಲ್ಲಿ ಮದ್ಯನಿಷೇಧ ಜಾರಿಯಲ್ಲಿದ್ದು, ಕೋಡಿನ್ ಒಳಗೊಂಡಿರುವ ಫೆನ್ಸೆಡಿಲ್ ಮತ್ತೇರಿಸಿಕೊಳ್ಳಲು ಅಲ್ಲಿ ದುರ್ಬಳಕೆಯಾಗುತ್ತಿದೆ.

ಯುವಜನರು ಈ ಸಿರಪ್‌ನ್ನು ಹೆಚ್ಚಾಗಿ ಬಳಸುತ್ತಿದ್ದು, ನಶೆಗಾಗಿ ನಿಗದಿತ ಸಣ್ಣ ಡೋಸ್‌ನ ಬದಲು ಅತಿಯಾದ ಪ್ರಮಾಣದಲ್ಲಿ ಸೇವಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News