ಕೋಲ್ಕತಾ: ಬಂಗಾಳದ ಕವಿ ಅಜಿತ್ ದತ್ತ ಪುತ್ರಿ ಶರ್ಬರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2020-09-18 05:13 GMT

ಕೋಲ್ಕತಾ, ಸೆ.18: ಖ್ಯಾತ ಫ್ಯಾಶನ್ ಡಿಸೈನರ್ ಶರ್ಬರಿ ದತ್ತ ಕೋಲ್ಕತಾದ ತಮ್ಮ ನಿವಾಸದಲ್ಲಿ ಪಾರ್ಶ್ವವಾಯುವಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ದತ್ತ ಅವರಿಗೆ 63 ವರ್ಷ ವಯಸ್ಸಾಗಿತ್ತು

 ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಶರ್ಬರಿ ಗುರುವಾರ ಸಂಜೆ ಬ್ರೋಡ್ ಸ್ಟ್ರೀಟ್‌ನಲ್ಲಿರುವ ತಮ್ಮ ನಿವಾಸದ ವಾಶ್‌ರೂಮ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದತ್ತ ಬೆಳಗ್ಗೆಯಿಂದ ಫೋನ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಶರ್ಬರಿ ಸಾವಿಗೆ ಪಾರ್ಶ್ವವಾಯು ಕಾರಣ ಎಂದು ವೈದ್ಯರು ಪತ್ತೆ ಹಚ್ಚಿದ್ದು, ವಾಶ್‌ರೂಮ್‌ನಲ್ಲಿ ಪತ್ತೆಯಾಗಿರುವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

 ಬಂಗಾಳದ ಕವಿ ಅಜಿತ್ ದತ್ತ ಅವರ ಪುತ್ರಿಯಾಗಿರುವ ಶರ್ಬರಿ ಕಾಲೇಜು ಶಿಕ್ಷಣ ಪೂರೈಸಿದ ಬಳಿಕ ಫ್ಯಾಶನ್ ಡಿಸೈನ್‌ನಲ್ಲಿ ಒಲವು ತೋರಿದ್ದರು. ಶರ್ಬರಿ ಅವರ ಸಾವಿನ ಸುದ್ದಿ ಕೇಳಿ ಗಾಯಕರಾದ ಪರಮ ಬ್ಯಾನರ್ಜಿ ಹಾಗೂ ಉಜ್ಜೈನ್ ಮುಖರ್ಜಿ, ನಟರಾದ ಸ್ರಬಾಂತಿ ಚಟರ್ಜಿ, ರುಕ್ಮಿಣಿ ಮೊಐತ್ರಾ ಹಾಗೂ ಪುರ್ಜಾನಿ ಘೋಷ್, ರಂಗಭೂಮಿ ನಿರ್ದೇಶಕ ದೇಬೆಶ್ ಚಟರ್ಜಿ ಮತ್ತಿತತರು ಆಘಾತ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News