ರೈತರ ಮರಣಶಾಸನಕ್ಕೆ ಸಹಿ ಹಾಕುವುದಿಲ್ಲ: ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್

Update: 2020-09-20 08:14 GMT

ಹೊಸದಿಲ್ಲಿ, ಸೆ.20: ರಾಜ್ಯಸಭೆಯಲ್ಲಿ ಇಂದು ಮಂಡಿಸಲಾಗಿರುವ ಎರಡು ಮಸೂದೆಗಳು ರೈತರ ಆತ್ಮದ ಮೇಲಿನ ದಾಳಿ ಎಂದು ಹೇಳಿರುವ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಪಕ್ಷವು ರೈತರುಗಳ ಮರಣ ಶಾಸನಕ್ಕೆ ಸಹಿ ಹಾಕುವುದಿಲ್ಲ ಎಂದು ಹೇಳಿದ್ದಾರೆ.

"ಕಾಂಗ್ರೆಸ್ ಪಕ್ಷ ಈ ಮಸೂದೆಯನ್ನು ತಿರಸ್ಕರಿಸುತ್ತದೆ. ..ರೈತರುಗಳ ಮರಣಶಾಸನಕ್ಕೆ ನಾವು ಸಹಿ ಹಾಕುವುದಿಲ್ಲ...ನೀವು ಹೇಳುವಂತಹ ಲಾಭ ನಮ್ಮ ರೈತರಿಗೆ ಬೇಕಾಗಿಲ್ಲ. ನೀವೇಕೆ ಅವರನ್ನು ಬಲವಂತಪಡಿಸುತ್ತಿದ್ದೀರಿ. ರೈತರು ಅತ್ಯಂತ ಮುಖ್ಯವಾಗಿ ಪಂಜಾಬ್ ಹಾಗೂ ಹರ್ಯಾಣದ ರೈತರುಗಳು ಇಂತಹ ಮಸೂದೆಗಳು ರೈತರ ಆತ್ಮದ ಮೇಲಿನ ದಾಳಿ ಎಂದು ಭಾವಿಸಿದ್ದಾರೆ. ರೈತರು ಅನಕ್ಷರಸ್ಥರಲ್ಲ. ಇದು ಬೆಂಬಲ ಬೆಲೆಯನ್ನು ದೂರವಿಡುವ ಮಾರ್ಗ ಎಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಇದನ್ನು ಅಂಗೀಕರಿಸಿದ ನಂತರ ಕಾರ್ಪೊರೇಟ್ ಸಂಸ್ಥೆಗಳು ಕೃಷಿ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳುತ್ತವೆ''ಎಂದು ಕಾಂಗ್ರೆಸ್ ಸಂಸದ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News