ಪಂಜಾಬ್ ನ ರೈತರು ದುರ್ಬಲರು ಎಂದು ಭಾವಿಸಬೇಡಿ: ಬಿಜೆಪಿಗೆ ಮಿತ್ರಪಕ್ಷ ಅಕಾಲಿದಳ ಎಚ್ಚರಿಕೆ

Update: 2020-09-20 08:15 GMT

 ಹೊಸದಿಲ್ಲಿ,ಸೆ.20:ಪಂಜಾಬ್ ಹಾಗೂ ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿರುವ ಕೃಷಿ ವಲಯಕ್ಕೆ ಸಂಬಂಧಿಸಿದ ಮೂರು ಮಸೂದೆಗಳ ಕುರಿತು ಯಾವುದೇ ನಿರ್ಧಾರಕ್ಕೆ ಮೊದಲು ಅದನ್ನು ಆಯ್ಕೆ ಸಮಿತಿಗೆ ಕಳುಹಿಸಿಕೊಡಬೇಕೆಂದು ಬಿಜೆಪಿ ಮೈತ್ರಿಕೂಟ ಶಿರೋಮಣಿ ಅಕಾಲಿದಳ ತಿಳಿಸಿದೆ.

ಪಂಜಾಬ್‌ನ ರೈತರು ದುರ್ಬಲರು ಎಂದು ಭಾವಿಸಬೇಡಿ ಎಂದು ಅಕಾಲಿದಳದ ಸಂಸದ ನರೇಶ್ ಗುಜ್ರಾಲ್ ಹೇಳಿದ್ದಾರೆ.

ಮೊದಲು ಮಸೂದೆಗೆ ಬೆಂಬಲ ನೀಡಿದ್ದ ಅಕಾಲಿದಳ ರೈತರ ಆಕ್ರೋಶ ಹೆಚ್ಚಾದ ಬಳಿಕ ತನ್ನ ನಿಲುವನ್ನು ಬದಲಿಸಿಕೊಂಡಿತು. ನರೇಂದ್ರ ಮೋದಿ ಸರಕಾರದಲ್ಲಿರುವ ಅಕಾಲಿದಳದ ಏಕೈಕ ಸಚಿವೆ ಹರ್‌ಸಿಮ್ರಾತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News