ಕೊರೋನ ಬಾಧಿತ ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆಸ್ಪತ್ರೆಗೆ ದಾಖಲು

Update: 2020-09-23 13:14 GMT

ಹೊಸದಿಲ್ಲಿ , ಸೆ.23:ಕಳೆದ ವಾರ ಕೊರೋನ ಸೋಂಕಿಗೆ ಒಳಗಾಗಿರುವ ದಿಲ್ಲಿ ಸರಕಾರದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಂಡು ಬಂದ ಕಾರಣ ನಗರದ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ಬುಧವಾರ  ದಾಖಲಾಗಿದ್ದಾರೆ.

ಸೆಪ್ಟಂಬರ್ 14ರಂದು  ಕೊರೋನ ಸಾಂಕ್ರಾಮಿಕ ಕಾಯಿಲೆ ಇರುವುದು ಪತ್ತೆಯಾದ ಬಳಿಕ ಸಿಸೋಡಿಯಾ ತಮ್ಮ ಅಧಿಕೃತ ನಿವಾಸದಲ್ಲಿ ಸ್ವಯಂ ಪ್ರತ್ಯೇಕವಾಗಿದ್ದರು.

ಸೆಪ್ಟಂಬರ್ 14 ರಂದು ಟ್ವಿಟರ್ ಮೂಲಕ ತನಗೆ ಕೊರೋನ ಇರುವುದನ್ನು ಖಚಿತಪಡಿಸಿದ್ದ ಸಿಸೋಡಿಯಾ ತನ್ನೊಂದಿಗೆ ಸಂಪರ್ಕದಲ್ಲಿರುವವರು ಪರೀಕ್ಷೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News