ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ ಸಮನ್ಸ್: ಗೋವಾದಿಂದ ಮುಂಬೈಗೆ ಹಿಂದಿರುಗಿದ ಪಡುಕೋಣೆ, ಸಾರಾ ಅಲಿ ಖಾನ್

Update: 2020-09-24 18:21 GMT

ಮುಂಬೈ, ಸೆ. 24: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಮಾದಕ ದ್ರವ್ಯದ ಆಯಾಮದ ತನಿಖೆ ನಡೆಸುತ್ತಿರುವ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ ಸಮನ್ಸ್ ನೀಡಿದ ಒಂದು ದಿನದ ಬಳಿಕ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಸಾರಾ ಅಲಿ ಖಾನ್ ಗೋವಾದಿಂದ ಗುರುವಾರ ಮುಂಬೈಗೆ ಹಿಂದಿರುಗಿದ್ದಾರೆ.

ಚಿತ್ರೋದ್ಯಮಕ್ಕೆ ಮಾದಕ ದ್ರವ್ಯದ ನಂಟು ಆರೋಪಕ್ಕೆ ಸಂಬಂಧಿಸಿ ತನಿಖೆಯನ್ನು ವಿಸ್ತೃತಗೊಳಿಸಿರುವ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ ಇತರ ಇಬ್ಬರು ನಟಿಯರಾದ ಶ್ರದ್ಧಾ ಕಪೂರ್ ಹಾಗೂ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಕೂಡ ಸಮನ್ಸ್ ಜಾರಿ ಮಾಡಿದೆ.

ದೀಪಿಕಾ ಪಡುಕೋಣೆಗೆ ಶುಕ್ರವಾರ ತನಿಖಾ ಸಂಸ್ಥೆ ಮುಂದೆ ಹಾಜರಾಗಲು ಸೂಚಿಸಲಾಗಿದೆ. ಆದರೆ, ಅವರು ಶನಿವಾರ ಹಾಜರಾಗಲಿದ್ದಾರೆ. ಅದೇ ದಿನ ಸಾರಾ ಅಲಿ ಖಾನ್ ಹಾಗೂ ಶ್ರದ್ಧಾ ಕಪೂರ್ ಕೂಡ ಹಾಜರಾಗಲಿದ್ದಾರೆ. ರಾಕುಲ್ ಪ್ರೀತ್ ಸಿಂಗ್ ತನಿಖಾ ಸಂಸ್ಥೆ ಮುಂದೆ ಇಂದು ಹಾಜರಾಗಿದ್ದಾರೆ. ಅವರ ವಿಚಾರಣೆ ನಾಳೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News