ಪಾಕ್‌ನಲ್ಲಿ ನೂರಾರು ಪತ್ರಕರ್ತರು, ಹೋರಾಟಗಾರರ ಹತ್ಯೆ ಮುಚ್ಚಿಡಲು ಅಸಾಧ್ಯ

Update: 2020-10-01 17:20 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 1: ಪಾಕಿಸ್ತಾನವು ಎಲ್ಲ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಘನತೆಯನ್ನು ತಗ್ಗಿಸಲು ನಿರಂತರ ಪ್ರಯತ್ನಗಳನ್ನು ನಡೆಸಿದರೂ, ಆ ದೇಶದಲ್ಲಿ ನಡೆಯುತ್ತಿರುವ ನೂರಾರು ಪತ್ರಕರ್ತರು ಮತ್ತು ಮಾನವಹಕ್ಕು ಹೋರಾಟಗಾರರ ಹತ್ಯೆಯನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಭಾರತ ಬುಧವಾರ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಹೇಳಿದೆ.

‘‘ಪಾಕಿಸ್ತಾನ ಮತ್ತು ಅದರ ನಿಯಂತ್ರಣದಲ್ಲಿರುವ ಭಯೋತ್ಪಾದಕರು ನಡೆಸುತ್ತಿರುವ ಪತ್ರಕರ್ತರು, ಮಾನವಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಮತ್ತು ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹತ್ಯೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ’’ ಎಂದು ವಿಶ್ವಸಂಸ್ಥೆಯಲ್ಲಿ ಭಾರತೀಯ ನಿಯೋಗದ ಪ್ರಥಮ ಕಾರ್ಯದರ್ಶಿ ಪವನ್ ಬಢೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News