ಊಟಕ್ಕೆ ಮೊಟ್ಟೆ ಸಾರು ಮಾಡಿಲ್ಲವೆಂದು ಸ್ನೇಹಿತನನ್ನೇ ಕೊಂದ!

Update: 2020-10-18 14:29 GMT
ಸಾಂದರ್ಭಿಕ ಚಿತ್ರ

ನಾಗ್ಪುರ,ಅ.18: ಊಟಕ್ಕೆ ಎಗ್ ಕರಿ (ಮೊಟ್ಟೆಯ ಸಾರು) ಮಾಡಿಲ್ಲವೆಂದು ರೊಚ್ಚಿಗೆದ್ದು ಸ್ನೇಹಿತನನ್ನೇ ಕೊಲೆ ಮಾಡಿದ ವ್ಯಕ್ತಿಯನ್ನು ಇಲ್ಲಿಯ ಮನಕಾಪುರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬನಾರಸಿ (40) ಎಂಬಾತನ ಮೃತದೇಹ ತಲೆಗೆ ಗಾಯಗಳಾಗಿದ್ದ ಸ್ಥಿತಿಯಲ್ಲಿ ಗ್ಯಾರೇಜೊಂದರ ಬಳಿ ಪತ್ತೆಯಾಗಿತ್ತು. ತನಿಖೆಯ ಸಂದರ್ಭ ಲಭ್ಯ ಸುಳಿವುಗಳ ಆಧಾರದಲ್ಲಿ ಆತನ ಸ್ನೇಹಿತ ಗೌರವ ಗಾಯಕವಾಡ್ (38) ಎಂಬಾತನನ್ನು ಶನಿವಾರ ಬಂಧಿಸಲಾಗಿದೆ.

ಬನಾರಸಿ ಶುಕ್ರವಾರ ಗಾಯಕವಾಡ್‌ನನ್ನು ಊಟಕ್ಕೆ ಆಹ್ವಾನಿಸಿದ್ದ. ಇಬ್ಬರೂ ತಡರಾತ್ರಿಯವರೆಗೆ ಮದ್ಯಪಾನ ಮಾಡಿದ್ದರು. ಊಟಕ್ಕೆ ತಾನು ಎಗ್ ಕರಿಯನ್ನು ಮಾಡಿಲ್ಲ ಎಂದು ಬನಾರಸಿ ತಿಳಿಸಿದಾಗ ಅವರ ನಡುವೆ ಜಗಳ ನಡೆದಿತ್ತು. ಈ ಸಂದರ್ಭ ಗಾಯಕವಾಡ್ ಕಬ್ಬಿಣದ ರಾಡ್‌ನಿಂದ ಬನಾರಸಿಯ ತಲೆಗೆ ಹೊಡೆದು ಆತನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News