ಬಸ್ಸು ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ; ಪ್ರಯಾಣಿಕರು ಪಾರು

Update: 2020-10-20 17:34 GMT
ಸಾಂದರ್ಭಿಕ ಚಿತ್ರ

ಮುಂಬೈ, ಅ.20: ಮುಂಬೈಯ ಸರಕಾರಿ ಸಾರಿಗೆ ಬಸ್ಸಿನ ಚಾಲಕ ಬಸ್ಸು ಚಲಾಯಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಬಸ್ಸು ಸಿಗ್ನಲ್ ಕಂಬಕ್ಕೆ ಡಿಕ್ಕಿಯಾದರೂ, ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಮಂಗಳವಾರ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚೆಂಬೂರ್‌ನಿಂದ ಟಾಟ ಪವರ್‌ಹೌಸ್‌ಗೆ ಸಂಚರಿಸುತ್ತಿದ್ದ ‘ಬೆಸ್ಟ್’ ಬಸ್ಸು ಬೆಳಿಗ್ಗೆ 11 ಗಂಟೆಯ ವೇಳೆಗೆ ಬಸಂತ್ ಸಿನೆಮ ಬಳಿ ಸಂಚರಿಸುತ್ತಿದ್ದ ಸಂದರ್ಭ ಚಾಲಕ ಹೃದಯಾಘಾತಕ್ಕೆ ಒಳಗಾಗಿದ್ದು ನಿಯಂತ್ರಣ ಕಳೆದುಕೊಂಡ ಬಸ್ಸು ಅಡ್ಡಾದಿಡ್ಡಿ ಸಂಚರಿಸಿ ರಸ್ತೆ ಬದಿಯ ಸಿಗ್ನಲ್ ಕಂಬಕ್ಕೆ ಡಿಕ್ಕಿಯಾಗಿದೆ. ಬಸ್ಸಿನಲ್ಲಿ ಪೊಲೀಸ್ ಸಿಬಂದಿ ಸಹಿತ 9 ಪ್ರಯಾಣಿಕರಿದ್ದು ಎಲ್ಲರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ತಕ್ಷಣ ಪೊಲೀಸ್ ಸಿಬಂದಿ ಪೊಲೀಸ್ ಜೀಪ್‌ಗೆ ಕರೆ ಮಾಡಿದ್ದು ಅದರಲ್ಲಿ ಚಾಲಕನನ್ನು ಕರೆದೊಯ್ದು ವಿದ್ಯಾವಿಹಾರದ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News