ಬಿಜೆಪಿ ಸೇರಿದರೆ 50 ಕೋಟಿ ರೂ., ಸಚಿವ ಸ್ಥಾನದ ಆಫರ್ ನೀಡಿದ್ದ ಸಿಂಧಿಯಾ: ಕಾಂಗ್ರೆಸ್ ನಾಯಕನ ಆರೋಪ
Update: 2020-10-31 16:24 GMT
ಭೋಪಾಲ್: ಬಿಜೆಪಿಗೆ ಸೇರ್ಪಡೆಗೊಂಡರೆ 50 ಕೋಟಿ ರೂ.ಗಳನ್ನು ಮತ್ತು ಸಚಿವ ಸ್ಥಾನವನ್ನು ನೀಡುವುದಾಗಿ ಬಿಜೆಪಿ ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ತನಗೆ ಆಫರ್ ನೀಡಿದ್ದರು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಉಮಾಂಗ್ ಸಿಂಘಾರ್ ಆರೋಪಿಸಿದ್ದಾರೆ.
ಬದ್ನವಾರ್ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ನ ಹಲವು ಶಾಸಕರು ಬೆಂಗಳೂರಿಗೆ ಹೋದಾಗ, ನನಗೆ ಕಾಂಗ್ರೆಸ್ ನಲ್ಲಿ ಯಾವುದೇ ಭವಿಷ್ಯವಿಲ್ಲ ಎಂದು ಸಿಂಧಿಯಾ ಜಿ ಹೇಳಿದರು. ನಾನು ಬಿಜೆಪಿ ಕಡೆಗೆ ಹೋದರೆ, 50 ಕೋಟಿ ರೂ. ಮತ್ತು ಸಚಿವ ಸ್ಥಾನ ಸಿಗಲಿದೆ ಎಂದರು. ಆದರೆ ನಾನು ಆಫರನ್ನು ತಿರಸ್ಕರಿಸಿದೆ. ನಾವು ಇಬ್ಬರೂ ಬೇರೆ ಬೇರೆ ದಾರಿಯಲ್ಲಿ ಸಾಗುತ್ತಿದ್ದೇವೆ. ನನಗೆ ಅವಕಾಶವಾದದ ರಾಜಕೀಯದಲ್ಲಿ ನಂಬಿಕೆಯಿಲ್ಲ” ಎಂದು ಸಿಂಘಾರ್ ಹೇಳಿದರು.