ಗೃಹ ಸಚಿವ ಅಮಿತ್ ಶಾ ಅವರತ್ತ ಭಿತ್ತಿಪತ್ರ ಎಸೆತ

Update: 2020-11-21 13:50 GMT

ಚೆನ್ನೈ: ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಭೇಟಿಗಾಗಿ ನಗರಕ್ಕೆ ಆಗಮಿಸಿದಾಗ 60ರ ವಯಸ್ಸಿನ ವ್ಯಕ್ತಿಯೊಬ್ಬ ಅವರತ್ತ ಭಿತ್ತಿಪತ್ರ ಎಸೆದಿರುವ ಅಹಿತಕರ ಘಟನೆ ನಡೆದಿದೆ. ವಿಮಾನ ನಿಲ್ದಾಣ ಸಮೀಪದ ಪೊಲೀಸ್ ಠಾಣೆಯಲ್ಲಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

ವ್ಯಕ್ತಿಯನ್ನು ನಂಗನಲ್ಲೂರಿನ ದುರೈರಾಜ್ ಎಂದು ಗುರುತಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯ ಬಳಿಕ ಪೊಲೀಸರು ತಿಳಿಸಿದ್ದಾರೆ. ಅಮಿತ್ ಶಾ ವಿಮಾನ ನಿಲ್ದಾಣದಿಂದ ಹೊಟೇಲ್ ನತ್ತ ಹೋಗುವ ಹಾದಿಯಲ್ಲಿ ಬಿಜೆಪಿ ಹಾಗೂ ಎಐಎಡಿಎಂಕೆ ಪಕ್ಷದ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ ಶಾ ಅವರನ್ನು ಸ್ವಾಗತಿಸಿದರು. ಅಮಿತ್ ಶಾ ಬೆಂಗಾವಲು ವಾಹನದಿಂದ ಕೆಳಗಿಳಿದು ಬೆಂಬಲಿಗರತ್ತ ಕೈಬೀಸುತ್ತಾ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಭಿತ್ತಿಪತ್ರವನ್ನು ಅಮಿತ್ ಶಾ ಅವರತ್ತ ಎಸೆಯಲು ಯತ್ನಿಸಿದ್ದಾನೆ.  

ರಾಜ್ಯ ಬಿಜೆಪಿ ಅಧ್ಯಕ್ಷ ಮುರುಗನ್ ಪೊಲೀಸರತ್ತ ತೆರಳಿ ಘಟನೆಯ ಕುರಿತು ವಿಚಾರಿಸಿದರು. ಘಟನೆಗೆ ಸಂಬಂಧಿಸಿ ಪೊಲೀಸರು ದುರೈರಾಜ ಎಂಬಾತನನ್ನು ಬಂಧಿಸಿದ್ದು, ಬಂಧಿತ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News