ಮುಷ್ಕರ ನಿರತ ರೈತರನ್ನು ದೇಶದ್ರೋಹಿಗಳು ಅನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಆಪ್ ವಕ್ತಾರ

Update: 2020-12-14 14:38 GMT
ರಾಘವ್ ಛಡ್ಡಾ (Photo: Twitter)

ದಿಲ್ಲಿ,ಡಿ.14: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ದೇಶದ್ರೋಹಿಗಳು ಅನ್ನುವವರು ಪಾಕಿಸ್ತಾನಕ್ಕೆ ತೆರಳಬೇಕು. ಅಂತಹಾ ಹೇಳಿಕೆ ನೀಡುವ ವ್ಯಕ್ತಿಗಳೇ ದೇಶಕ್ಕೆ ಮಾರಕ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ರಾಘವ್ ಛಡ್ಡಾ  ಹೇಳಿಕೆ ನೀಡಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

“ಸಂಪೂರ್ಣ ದೇಶಕ್ಕೆ ಅನ್ನಾಹಾರವನ್ನು ನೀಡುವ ರೈತರನ್ನು ಕೆಲವೊಂದು ವ್ಯಕ್ತಿಗಳು ದೇಶದ್ರೋಹಿಗಳು ಅನ್ನುತ್ತಿದ್ದಾರೆ. ನಿಜವಾಗಿ ಈ ಹೇಳಿಕೆ ನೀಡುವವರೇ ದೇಶದ್ರೋಹಿಗಳು ಮತ್ತು ಸಮಾಜ ಘಾತುಕರು. ಅಂತಹಾ ವ್ಯಕ್ತಿಗಳಿಗೆ ಈ ದೇಶದಲ್ಲಿ ಜಾಗವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ರಾಘವ್ ಛಡ್ಡಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಬಿಜೆಪಿ ವಕ್ತಾರ ವೀರೇಂದರ್ ಬಬ್ಬರ್, “ಎಲ್ಲರೂ ರೈತರಿಗೆ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯೂ ಕೂಡಾ ರೈತರಿಗೆ ಬೆಂಬಲ ನೀಡುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News