2020ನೇ ಸಾಲಿನ ಪುತಿನ ಕಾವ್ಯ ನಾಟಕ ಪ್ರಶಸ್ತಿಗೆ ಎಸ್.ದಿವಾಕರ್ ಆಯ್ಕೆ
Update: 2020-12-23 17:43 IST
ಬೆಂಗಳೂರು, ಡಿ.23: ಡಾ.ಪು.ತಿ.ನರಸಿಂಹಾಚಾರ್ ಟ್ರಸ್ಟ್ ಕೊಡಮಾಡುವ 2020ನೇ ಸಾಲಿನ ಪ್ರತಿಷ್ಠಿತ ಪುತಿನ ಕಾವ್ಯ ನಾಟಕ ಪ್ರಶಸ್ತಿಗೆ ಲೇಖಕ ಎಸ್.ದಿವಾಕರ್ ಆಯ್ಕೆಯಾಗಿದ್ದಾರೆ.
ಎಸ್.ದಿವಾಕರ್ ಅವರ ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ ಕವನ ಸಂಕಲನ ಪುತಿನ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಡಿಸೆಂಬರ್ 27ರಂದು ಆನ್ಲೈನ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.