ಕೃಷಿ ಕಾನೂನು ರದ್ದತಿಗೆ ಆಗ್ರಹಿಸಿ ರಾಜಭವನದತ್ತ ಸಾವಿರಾರು ರೈತರಿಂದ ಮೆರವಣಿಗೆ
Update: 2020-12-29 13:38 IST
ಪಾಟ್ನಾ: ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಸಾವಿರಾರು ರೈತರು ಮಂಗಳವಾರ ಪಾಟ್ನಾದ ರಾಜಭವನಕ್ಕೆ ಮೆರವಣಿಗೆಯಲ್ಲಿ ತೆರಳಿದರು. ಈ ಮೂಲಕ ದೇಶಾದ್ಯಂತ ನಡೆಯತ್ತಿರುವ ಪ್ರತಿಭಟನೆಗೆ ಕೈಜೋಡಿಸಿದರು.
ಸಾವಿರಾರು ರೈತರು ಕಳೆದೊಂದು ತಿಂಗಳಿನಿಂದ ದಿಲ್ಲಿ ಹೆದ್ದಾರಿಯಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಪೋರೇಟ್ಗಳು ಕೃಷಿ ವಲಯದಲ್ಲಿ ಪ್ರಾಬಲ್ಯ ಸಾಧಿಸಿ ತಮ್ಮ ಆದಾಯಕ್ಕೆ ಕುತ್ತುತರಲಿದ್ದಾರೆಂಬ ಆತಂಕದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.