"ಕುದುರೆಯನ್ನು ನೀರಿರುವಲ್ಲಿ ಕೊಂಡೊಯ್ಯಬಹುದು, ನೀರು ಕುಡಿಸಲು ಸಾಧ್ಯವಿಲ್ಲ"

Update: 2021-01-11 07:53 GMT

ಹೊಸದಿಲ್ಲಿ,ಜ.11: ಲಡಾಖ್‍ನಿಂದ ಚೀನಾದ ಪಡೆಗಳನ್ನು  ವಿದೇಶಿ ಸಹಾಯವಿಲ್ಲದೆ ತೆರವುಗೊಳಿಸಬೇಕು ಎಂದು ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ನರೇಂದ್ರ ಮೋದಿ ಸರಕಾರವನ್ನು ಆಗ್ರಹಿಸಿದ್ದಾರೆ. "ಕುದುರೆಯನ್ನು ನೀರಿನ ಬಳಿ ಕೊಂಡೊಯ್ಯಬಹುದು ಆದರೆ ಅದು ನೀರು ಕುಡಿಯುವಂತೆ ಮಾಡಲು ಸಾಧ್ಯವಿಲ್ಲ," ಎಂದು  ಸ್ವಾಮಿ ಟ್ವೀಟ್ ಮಾಡಿದ್ದಾರೆ.

"1962ರ ಸೋಲು ನೆಹರೂ ಅವರ ಸೋಲು, ಭಾರತ ಮಾತೆಯ ಸೋಲಲ್ಲ ಎಂದು ನಾವು  ನಮ್ಮ ಕ್ರಮದ ಮೂಲಕ ಸಾಬೀತು ಪಡಿಸಬೇಕು, ಸುಮ್ಮನೆ  ಹುಲ್ಲುಕಡ್ಡಿಗೆ ಜೋತುಕೊಳ್ಳದೆ ಇದನ್ನು ಮಾಡಬೇಕು. ಅಂದರೆ ವಿದೇಶಿ ಸಹಾಯವಿಲ್ಲದೆ ನಾವೂ ಚೀನೀ ಪಡೆಗಳನ್ನು ಲಡಾಖ್‍ನಿಂದ ಹೊರದಬ್ಬಬೇಕು. ಹೇಗೆ ? ನನಗೆ ಕುದುರೆಯನ್ನು ನೀರಿನ ಬಳಿ ಕೊಂಡೊಯ್ಯಬಹುದು ಆದರೆ  ಅದು ನೀರು ಕುಡುಯುವಂತೆ ಮಾಡಲು ನನ್ನಿಂದ ಸಾಧ್ಯವಿಲ್ಲ," ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಚೀನಾದ ಸೇನೆಯಿಂದ ಯಾವುದೇ ಅತಿಕ್ರಮಣ ನಡೆದಿಲ್ಲ ಎಂದು ಈ ಹಿಂದೆ ಹೇಳಿರುವ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಯನ್ನೂ ಖಂಡಿಸುವ ರೀತಿಯಲ್ಲಿ ಇನ್ನೊಂದು ಪೋಸ್ಟ್ ಮಾಡಿರುವ ಸ್ವಾಮಿ- "ಕೋಯಿ ಆಯಾ ನಹೀ ಔರ್ ಕೋಯಿ ಗಯಾ ನಹೀ ಎಂದು ನಾವು ಎಷ್ಟು ಸಮಯ ಅಂದುಕೊಳ್ಳಬಹುದು? ಮಾರ್ಚ್-ಎಪ್ರಿಲ್ 2021ರಲ್ಲಿ ಪಿಎಲ್‍ಎ ಅರುಣಾಚಲವನ್ನೂ ಪ್ರವೇಶಿಸಬಹುದು. ಇದು ಸತ್ಯದ ಕ್ಷಣವಾಗಿದೆ," ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News