ಮಹಾರಾಷ್ಟ್ರ ಆಸ್ಪತ್ರೆ ಬೆಂಕಿ ದುರಂತ: ನರ್ಸ್ ವಿರುದ್ಧ ಶಿಕ್ಷಾರ್ಹ ನರಹತ್ಯೆ ಪ್ರಕರಣ ದಾಖಲು

Update: 2021-02-19 16:18 GMT

ಮುಂಬೈ, ಫೆ.19: ವಿದರ್ಭದ ಭಂಡಾರ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ನರ್ಸ್‌ಗಳ ವಿರುದ್ಧ ಶಿಕ್ಷಾರ್ಹ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್‌ಮುಖ್ ಶುಕ್ರವಾರ ಹೇಳಿದ್ದಾರೆ.

ಇಬ್ಬರು ನರ್ಸ್‌ಗಳು ಕರ್ತವ್ಯಲೋಪ ಎಸಗಿರುವುದಾಗಿ ಪ್ರಕರಣದ ವಿಚಾರಣೆಯನ್ನು ನಡೆಸಿದ ಡಿಎಸ್‌ಪಿ ಮಟ್ಟದ ಸಮಿತಿ ನೀಡಿದ ವರದಿ ಹಿನ್ನೆಲೆಯಲ್ಲಿ, ಈ ಇಬ್ಬರ ವಿರುದ್ಧ ಶಿಕ್ಷಾರ್ಹ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ. ಭಂಡಾರಾ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ವಿಶೇಷ ಆರೈಕೆ ವಿಭಾಗದಲ್ಲಿ ಕಳೆದ ತಿಂಗಳು ನಡೆದಿದ್ದ ಬೆಂಕಿ ದುರಂತದಲ್ಲಿ 10 ಶಿಶುಗಳು ಸಾವನ್ನಪ್ಪಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News