ಪಧಾನ ಮಂತ್ರಿ ಕಿಸಾನ್ ನ್ಯಾಶನಲ್ ಪ್ರಶಸ್ತಿಗೆ ಅನಂತಪುರಮು ಜಿಲ್ಲೆ ಆಯ್ಕೆ
Update: 2021-02-21 17:10 GMT
ಅಮರಾವತಿ, ಫೆ. 21: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯ ಫಲಾನುಭವಿಗಳ ಭೌತಿಕ ದೃಢೀಕರಣವನ್ನು ಶೇ. 99.6ರಷ್ಟು ಪೂರ್ಣಗೊಳಿಸಿರುವುದಕ್ಕಾಗಿ ಆಂಧ್ರಪ್ರದೇಶ ಅನಂತಪುರಮು ಜಿಲ್ಲೆ ಪ್ರಧಾನ ಮಂತ್ರಿ ಕಿಸಾನ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಹೊಸದಿಲ್ಲಿಯಲ್ಲಿ ಫೆಬ್ರವರಿ 24ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಧಮ್ ಚಂದ್ರುಡು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.