ಶ್ರೀನಗರ: ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯೋಧನ ಮೃತದೇಹ ಪತ್ತೆ

Update: 2021-03-04 17:47 GMT

ಶ್ರೀನಗರ, ಮಾ. 3: ಶ್ರೀನಗರದ ಸೆಂಟ್ರಿ ಠಾಣೆಯಲ್ಲಿ ಸೇನಾ ಯೋಧನೋರ್ವನ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯೋಧ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯೋಧ ಅನೂಪ್ ಕುಮಾರ್ (28) ಅವರನ್ನು ಜಮ್ಮು ಹಾಗೂ ಕಾಶ್ಮೀರದ ಬಾದಾಮಿಬಾದ್ ಕಂಟೋನ್ಮೆಂಟ್‌ನಲ್ಲಿ ಸೆಂಟ್ರಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರ ಮೃತದೇಹ ಇಲ್ಲಿನ ಬಟ್ವಾರಾದ ಮುಖ್ಯ ಗೇಟಿನಲ್ಲಿರುವ ಸೆಂಟ್ರಿ ಠಾಣೆಯಲ್ಲಿ ಸೀಲಿಂಗ್‌ಗೆ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅನೂಪ್ ಕುಮಾರ್ ಅವರು ಹರ್ಯಾಣದ ನಿವಾಸಿ. ಅವರು ಆತ್ಮಹತ್ಯೆಯ ಕಾರಣ ಇದುವರೆಗೆ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜೌರಿ ಜಿಲ್ಲೆಯಲ್ಲಿ ಬುಧವಾರ 24 ವರ್ಷದ ಯೋಧನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇಲ್ಲಿನ ಖನ್ಮೋಹ್ ಸೇನಾ ಡಿಪೋದಲ್ಲಿ ಲೆಫ್ಟಿನೆಂಟ್ ರ್ಯಾಂಕ್‌ನ ಸೇನಾಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News