ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ‘ಬಂಗಾರದಂತೆ’ ಮಾಡುತ್ತೇವೆ: ಪ್ರಧಾನಿ ಭರವಸೆ

Update: 2021-03-07 12:27 GMT

ಕೋಲ್ಕತಾ: ಪಶ್ಚಿಮಬಂಗಾಳ ಚುನಾವಣಾ ಪ್ರಚಾರಕ್ಕೆ ಇಂದು ಚಾಲನೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಗೆ ಅಧಿಕಾರಕ್ಕೆ ನೀಡಿದರೆ ಸೋನಾರ್ ಬಾಂಗ್ಲಾ(ಗೋಲ್ಡನ್ ಬಂಗಾಳ)ಮಾಡುವುದಾಗಿ ಭರವಸೆ ನೀಡಿದ್ದಾರೆ.

ಹೆಚ್ಚಿನ ನಿರೀಕ್ಷೆ ಇಟ್ಟಿದ್ದ ಜನರನ್ನು ನಿರಾಸೆಗೊಳಿಸಿದ್ದಕ್ಕಾಗಿ ರಾಜ್ಯ ಸರಕಾರದ ಮೇಲೆ ಮುಗಿಬಿದ್ದ ಪ್ರಧಾನಿ, ಪರಿವರ್ತನೆಗಾಗಿ ಬಂಗಾಳವು ದೀದಿಯನ್ನು ನಂಬಿತ್ತು. ಆದರೆ, ಅವರು ನಂಬಿಕೆಯನ್ನು ಹಾಳು ಮಾಡಿದ್ದಾರೆ ಎಂದು ಬೃಹತ್ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಹೇಳಿದರು.

‘ಸೋನಾರ್ ಬಾಂಗ್ಲಾ’ದ ಕನಸು ಈಡೇರಲಿದೆ.  ಬಂಗಾಳದ ಅಭಿವೃದ್ದಿಯ ಬಗ್ಗೆ ನಿಮಗೆ ಭರವಸೆ ನೀಡಲು, ಇಲ್ಲಿ ಹೂಡಿಕೆ ಹೆಚ್ಚಿಸಲು, ಬಂಗಾಳದ ಸಂಸ್ಕøತಿಯನ್ನು ರಕ್ಷಿಸಲು ಹಾಗೂ ಬದಲಾವಣೆ ತರಲು ನಾನು ಇಂದು ಇಲ್ಲಿಗೆ  ಬಂದಿದ್ದೇನೆ ಎಂದು ನಗರದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News