ದೇವಸ್ಥಾನದ ನೀರು ಕುಡಿದ ಮುಸ್ಲಿಂ ಬಾಲಕನನ್ನು ಥಳಿಸಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
ಗಾಝಿಯಾಬಾದ್: ದೇವಸ್ಥಾನದೊಳಗೆ ನೀರು ಕುಡಿದ ಮುಸ್ಲಿಂ ಬಾಲಕನಿಗೆ ವ್ಯಕ್ತಿಯೊಬ್ಬ ನಿರ್ದಯವಾಗಿ ಥಳಿಸುತ್ತಿರುವ ವೀಡಿಯೋ ವೈರಲ್ ಆದ ನಂತರ ಪೊಲೀಸರು ಆರೋಪಿ ಶೃಂಗಿ ನಂದನ್ ಯಾದವ್ ಎಂಬಾತನನ್ನು ಬಂಧಿಸಿದ್ದಾರೆ.
ವೀಡಿಯೋದಲ್ಲಿ ಆರೋಪಿ ಮೊದಲು ಆ ಮುಸ್ಲಿಂ ಬಾಲಕನನ್ನು ಆಲಂಗಿಸಿ ನಂತರ ಆತನಿಗೆ ಮನಬಂದಂತೆ ಥಳಿಸಿದ್ದಾನೆ. "ನಿನ್ನ ಹೆಸರೇನು?" ಎಂದು ಮೊದಲು ಆ ಬಾಲಕನಲ್ಲಿ ಕೇಳಿದ ಆರೋಪಿ ಆತ ತಾನು ಆಸಿಪ್, ಹಬೀಬ್ ಎಂಬಾತನ ಪುತ್ರ ಎಂದು ಹೇಳುತ್ತಲೇ ಆತನಿಗೆ ಥಳಿಸಲು ಆರಂಭಿಸಿದ್ದ ಹಾಗೂ ನಿಂದಿಸಿದ್ದ ಎಂದು ತಿಳಿದು ಬಂದಿದೆ.
ಈ ಘಟನೆಯನ್ನು ಖಂಡಿಸಿರುವ ಸಾಮಾಜಿಕ ಜಾಲತಾಣಿಗರು ಆರೋಪಿ ತನ್ನ ಅಮಾನವೀಯ ಕೃತ್ಯದಿಂದ ಹಿಂದು ಧರ್ಮಕ್ಕೆ ಅಗೌರವ ತೋರಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ವಿಶೇಷ ತಂಡ ರಚಿಸಿ ಆತನನ್ನು ಬಂಧಿಸಿದ್ದು ಆತ ಬಿಹಾರದ ಭಗಲ್ಪುರ್ ನಿವಾಸಿ ಎಂದು ತಿಳಿದು ಬಂದಿದೆ.
ಈ ಕುರಿತಾದಂತೆ ಟ್ವೀಟ್ ಮಾಡಿರುವ ರಿಫಾತ್ ಜಾವೇದ್, “ಮಗುವಿನ ಮೇಲೆ ನಿರ್ದಯವಾಗಿ ಹಲ್ಲೆ ಮಾಡಲು ನೀವು ಯಾವ ರೀತಿಯ ಅನಾರೋಗ್ಯ ಪೀಡಿತ ವ್ಯಕ್ತಿಯಾಗಿರಬೇಕು? ದೇವಾಲಯದಲ್ಲಿ ನೀರು ಕುಡಿಯಲು ಹೋದದ್ದು ಅವನ ತಪ್ಪೇ?. ಈ ರೋಗ್ರಗ್ರಸ್ಥ ಮನಸ್ಥಿತಿಯ ವ್ಯಕ್ತಿಯನ್ನು ಗಾಝಿಯಾಬಾದ್ ಪೊಲೀಸರು ಬಂಧಿಸುತ್ತಾರೆಂದು ಭಾವಿಸುತ್ತೇನೆ. ಆತ ಸಮಾಜಕ್ಕೆ ಅಪಾಯ” ಎಂದು ಹೇಳಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಗಾಝಿಯಾಬಾದ್ ಪೊಲೀಸ್, "ಈ ವೀಡಿಯೋ ನಮ್ಮ ಗಮನಕ್ಕೆ ಬಂದಿದ್ದು, ನಾವು ವಿಶೇಷ ತಂಡವೊಂದನ್ನು ರಚಿಸಿದ್ದೇವೆ" ಎಂದು ಪ್ರತಿಕ್ರಿಯಿಸಿದ್ದಾರೆ.
What kind of sick person you have to be to mercilessly assault a child? His fault was that he went to drink water in temple. Hope @ghaziabadpolice arrest this sick man! He’s a danger to society! https://t.co/2PuYCHhQlH
— Rifat Jawaid (@RifatJawaid) March 12, 2021
उपरोक्त वीडियो का तत्काल संज्ञान लेकर टीम गठित कर मार पिटाई करने वाले व्यक्ति- श्रृंगी नंदन यादव पुत्र अश्वनी कुमार यादव निवासी गोपालपुर थाना संवारा भागलपुर बिहार को हिरासत में लिया गया एवं मुकदमा पंजीकरण/वैधानिक कार्रवाई संबंधी प्रक्रिया प्रचलित की गई pic.twitter.com/MVEXfqwnJ6
— GHAZIABAD POLICE (@ghaziabadpolice) March 12, 2021