"ಆದಿತ್ಯನಾಥ್‌ ನೇತೃತ್ವದಲ್ಲಿ ತಾಜ್‌ ಮಹಲ್‌ ಅನ್ನು ʼರಾಮ ಮಹಲ್‌ʼ ಎಂದು ಮರುನಾಮಕರಣ ಮಾಡಲಾಗುವುದು"

Update: 2021-03-14 12:22 GMT

ಬಲ್ಲಿಯಾ: ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶ್ವ ವಿಖ್ಯಾತ ತಾಜ್‌ ಮಹಲ್‌ ಹೆಸರನ್ನು ʼರಾಮ್‌ ಮಹಲ್‌ʼ ಎಂದು ಮರುನಾಮಕರಣ ಮಾಡಲಾಗುವುದು ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಹೇಳಿಕೆ ನೀಡಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ನೇತೃತ್ವದಲ್ಲಿ ತಾಜ್‌ ಮಹಲ್‌ ಹೆಸರನ್ನು ಬದಲಾಯಿಸಲಾಗುವುದು ಎಂದು ಅವರು ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ  ಬೈರಿಯಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್‌ " ತಾಜ್‌ ಮಹಲ್‌ ಈ ಹಿಂದೆ ಶಿವನ ದೇವಾಲಯವಾಗಿತ್ತು. ಆದ್ದರಿಂದ ಇದರ ಹೆಸರನ್ನು ಆದಿತ್ಯನಾಥ್‌ ನೇತೃತ್ವದಲ್ಲಿ ರಾಮ ಮಹಲ್‌ ಎಂದು ಬದಲಾಯಿಸಲಾಗುವುದು. ಆದಿತ್ಯನಾಥ್‌ ಶಿವಾಜಿಯ ವಂಶಸ್ಥರಾಗಿದ್ದಾರೆ"

"ಸಮರ್ಥ ಗುರು ರಾಮದಾಸ್‌ ಶಿವಾಜಿಯನ್ನು ಭಾರತಕ್ಕೆ ಅರ್ಪಿಸಿದಂತೆಯೇ ಗೋರಖ್‌ ನಾಥ್‌ ಜೀ ಆದಿತ್ಯನಾಥ್‌ ರನ್ನು ಉತ್ತರ ಪ್ರದೇಶಕ್ಕೆಂದೇ ಸಮರ್ಪಣೆ ಮಾಡಿದ್ದಾರೆ" ಎಂದು ಮುಖ್ಯಮಂತ್ರಿಯನ್ನು ಹೊಗಳಿ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಸುರೇಂದ್ರ ಸಿಂಗ್‌ ಹಲವಾರು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News