ಮಾವೋವಾದಿಗಳಿಂದ ಅಪಹರಣಗೊಂಡಿದ್ದ ಯೋಧ ಬಿಡುಗಡೆ: ವರದಿ

Update: 2021-04-08 12:54 GMT

ಹೊಸದಿಲ್ಲಿ: ಛತ್ತೀಸ್‌ ಗಢದ ಬಿಜಾಪುರ ಎಂಬ ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ್ದ ದಾಳಿಯಲ್ಲಿ 22 ಮಂದಿ ಯೋಧರು ಮೃತಪಟ್ಟಿದ್ದು, ಓರ್ವ ಯೋಧನನ್ನು ಮಾವೋವಾದಿಗಳು ಅಪಹರಣಗೈದಿದ್ದರು. ಆತ ತಮ್ಮ ಬಳಿ ಇದ್ದಾನೆಂದು ಅವರು ಸಂದೇಶವನ್ನೂ ಕಳುಹಿಸದಿದ್ದರು. ಇದೀಗ ಅಪಹರಣಗೊಂಡಿದ್ದ ಯೋಧನನ್ನು ಮಾವೋವಾದಿಗಳು ಬಿಡುಗಡೆ ಮಾಡಿದ್ದಾಗಿ ANI ಸುದ್ದಿಸಂಸ್ಥೆಯು ವರದಿ ಮಾಡಿದೆ.

ಪೊಲೀಸ್‌ ಮೂಲಗಳ ಪ್ರಕಾರ, ನಕ್ಸಲರಿಂದ ಅಪಹೃತಗೊಂಡಿದ್ದ ಕೋಬ್ರಾ ಪಡೆಯ ರಾಕೇಶ್ವರ್‌ ಸಿಂಗ್‌ ಮನ್ಹಾಸ್‌ ನನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News