ಸಿದ್ದೀಕ್ ಕಪ್ಪನ್ ಅವರನ್ನು ಏಮ್ಸ್ ಅಥವಾ ಸಫ್ದರ್ ಜಂಗ್ ಗೆ ಸ್ಥಳಾಂತರಿಸಿ: ಸುಪ್ರೀಂಕೋರ್ಟ್ಗೆ ಮನವಿ
Update: 2021-04-23 09:20 GMT
ಹೊಸದಿಲ್ಲಿ: ಸಿದ್ದಿಕ್ ಕಪ್ಪನ್ ಜೀವ ಅಪಾಯದಲ್ಲಿದ್ದು, ಅವರನ್ನು ದಿಲ್ಲಿಯ ಏಮ್ಸ್ ಅಥವಾ ಸಫ್ದರ್ ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ಕೋರಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಕಪ್ಪನ್ ಎಪ್ರಿಲ್ 20ರಂದು ಗಂಭೀರ ಗಾಯದೊಂದಿಗೆ ಬಾತ್ ರೂಮ್ ನಲ್ಲಿ ಕುಸಿದುಬಿದ್ದಿದ್ದರು. ಬಳಿಕ ಅವರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ. ಸದ್ಯ ಅವರು ಮಥುರಾದ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಗೆ ದಾಖಲಾಗುವ ಮೊದಲು ಕಪ್ಪನ್ ಅವರನ್ನು ಮಥುರಾ ಜೈಲಿನಲ್ಲಿ ಇರಿಸಲಾಗಿತ್ತು.
ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಗೈಯ್ಯಲ್ಪಟ್ಟ ಉತ್ತರಪ್ರದೇಶದ ಹತ್ರಸ್ ನ ದಲಿತ ಯುವತಿಯ ಕುರಿತು ವರದಿ ಮಾಡಲು ತೆರಳುತ್ತಿದ್ದಾಗ ಉತ್ತರಪ್ರದೇಶ ಪೊಲೀಸರು ಕಪ್ಪನ್ ರನ್ನು ಕಳೆದ ವರ್ಷದ ಅಕ್ಟೋಬರ್ನಲ್ಲಿ ಬಂಧಿಸಿದ್ದರು. ಯುಎಪಿಎ ಹಾಗೂ ದೇಶ ದ್ರೋಹ ಪ್ರಕರಣದ ಅಡಿ ಕೇಸ್ ದಾಖಲಿಸಿದ್ದರು.