ನ್ಯಾಯಾಲಯಗಳು ಮೌಖಿಕವಾಗಿ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಬಾರದು: ಕೋರ್ಟ್‌ ಮೆಟ್ಟಿಲೇರಿದ ಚುನಾವಣಾ ಆಯೋಗ

Update: 2021-04-30 07:57 GMT

ಹೊಸದಿಲ್ಲಿ:  ನ್ಯಾಯಾಲಯಗಳು ನೀಡುವ ಮೌಖಿಕ ಹೇಳಿಕೆಗಳನ್ನು ಮಾಧ್ಯಮಗಳು ವರದಿ ಮಾಡುವುದಕ್ಕೆ ತಡೆ ಹೇರಬೇಕೆಂದು ಇಂದು ಚುನಾವಣಾ ಆಯೋಗ ಮದ್ರಾಸ್ ಹೈಕೋರ್ಟನ್ನು ವಿನಂತಿಸಿದೆ. ದೇಶದಲ್ಲಿ ಕೋವಿಡ್ ಎರಡನೇ ಅಲೆಗೆ ಚುನಾವಣಾ ಆಯೋಗವೇ ಏಕೈಕ ಕಾರಣ ಹಾಗೂ ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣಗಳನ್ನು  ದಾಖಲಿಸಬೇಕೆಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿರುವ ಬೆನ್ನಲ್ಲೇ ಚುನಾವಣಾ ಆಯೋಗದ ಈ ಮನವಿ ಬಂದಿದೆ.

ಹೈಕೋರ್ಟಿನ ಮೌಖಿಕ ಮಾತುಗಳ ಕುರಿತಾದ ಮಾಧ್ಯಮ ವರದಿಗಳಿಂದ ತನಗೆ ಬಹಳ ನೋವಾಗಿದೆ ಎಂದು ಚುನಾವಣಾ  ಆಯೋಗ ತನ್ನ ಅಪೀಲಿನಲ್ಲಿ ಹೇಳಿದೆಯಲ್ಲದೆ ವರದಿಗಳು ಆಯೋಗದ  ಘನತೆಗೆ ಧಕ್ಕೆ ತಂದಿದೆ ಎಂದಿದೆ.

ಮಾಧ್ಯಮ  ವರದಿಗಳ ನಂತರ ಪಶ್ಚಿಮ ಬಂಗಾಳದಲ್ಲಿ ಉಪ ಚುನಾವಣಾ ಆಯುಕ್ತರೊಬ್ಬರ ವಿರುದ್ಧ  ಕೊಲೆ ಆರೋಪ ಹೊರಿಸಿ ಪೊಲೀಸ್ ದೂರು ಕೂಡ ದಾಖಲಾಗಿದೆ ಎಂದು ಆಯೋಗ ತನ್ನ ಅರ್ಜಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News