ಸಿನಿಮಾ ಕಾರ್ಮಿಕರ ನೆರವಿಗೆ 10 ಲಕ್ಷ ರೂ.ದೇಣಿಗೆ ನೀಡಿದ ನಟ ಪುನೀತ್ ರಾಜ್‍ಕುಮಾರ್

Update: 2021-06-06 11:38 GMT
ಪುನೀತ್ ರಾಜ್‍ಕುಮಾರ್ (Photo: Facebook/PuneethRajkumar)

ಬೆಂಗಳೂರು, ಜೂ.6: ನಟ ಪುನೀತ್ ರಾಜ್‍ಕುಮಾರ್ ಅವರು ಸಿನಿಮಾ ಕಾರ್ಮಿಕರ ನೆರವಿಗಾಗಿ 10 ಲಕ್ಷ ರೂ.ದೇಣಿಗೆ ನೀಡಿದ್ದು, ಈ ದೇಣಿಗೆಯನ್ನು ಸ್ವೀಕರಿಸಿರುವ ಸಾ.ರಾ.ಗೋವಿಂದು ಅವರು ಪುನೀತ್ ರಾಜ್‍ಕುಮಾರ್ ಗೆ ಧನ್ಯವಾದ ತಿಳಿಸಿದ್ದಾರೆ.   

ಕಳೆದ ವರ್ಷ ಕರ್ನಾಟಕವು ಕೊರೋನ ಸಂಕಷ್ಟಕ್ಕೆ ಸಿಲುಕಿದ್ದಾಗಲೂ ಪುನೀತ್ ರಾಜ್‍ಕುಮಾರ್  ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ 1 ಕೋಟಿ ರೂ.ದೇಣಿಯ ಚೆಕ್ ಹಸ್ತಾಂತರಿಸಿದ್ದರು. 

ಕೆಲವು ದಿನಗಳ ಹಿಂದಷ್ಟೇ ನಟ ಯಶ್ ಚಿತ್ರರಂಗದ ಪೋಷಕ ಕಲಾವಿದರು, ಸಿನಿ ಕಾರ್ಮಿಕರು ಇತರೆ ತಂತ್ರಜ್ಞರ ಬ್ಯಾಂಕ್ ಖಾತೆಗೆ 5 ಸಾವಿರ ಮೊತ್ತವನ್ನು ಜಮಾ ಮಾಡಿದ್ದಾರೆ. ಯಶ್ ಅವರ ಈ ಕಾರ್ಯ ಬಹು ಮೆಚ್ಚುಗೆಗೆ ಪಾತ್ರವಾಗಿದೆ.

ಕಿಚ್ಚ ಸುದೀಪ್ ಸಹ ಹಿರಿಯ ಪೋಷಕ ನಟರು, ನಿರ್ದೇಶಕರಿಗೆ ಔಷಧ, ದಿನಸಿ ಪದಾರ್ಥಗಳನ್ನು ಕಳುಹಿಸಿದ್ದಾರೆ. ಉಪೇಂದ್ರ ಅವರು ಕೂಡ ಸಹಾಯ ಮಾಡುತ್ತಿದ್ದಾರೆ. ಜೊತೆಗೆ ಇತರೆ ನಟ-ನಟಿಯರೂ ದೊಡ್ಡ ಮಟ್ಟದಲ್ಲಿ ಜನರಿಗೆ, ಸಿನಿಮಾ ಕಾರ್ಮಿಕರಿಗೆ, ಪೋಷಕ ಕಲಾವಿದರಿಗೆ ನೆರವು ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News