ರಾಜಕೀಯ ಪ್ರವೇಶಿಸುವ ಯೋಜನೆ ಇಲ್ಲ: ರಜನಿಕಾಂತ್ ಘೋಷಣೆ

Update: 2021-07-12 06:18 GMT

ಚೆನ್ನಯ: ಸೂಪರ್‌ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಒತ್ತಿ ಹೇಳಿದರು ಹಾಗೂ  ಅವರ ಸಂಘಟನೆ ರಜನಿ ಮಕ್ಕಳ್  ಮಂದಿರವನ್ನು ವಿಸರ್ಜಿಸಿದರು.

ರಜನೀ ಮಕ್ಕಳ್ ಮಂದಿರ ವೇದಿಕೆಯ ಸದಸ್ಯರೊಂದಿಗೆ ಭೇಟಿಯಾಗಿ ಅದರ ಭವಿಷ್ಯದ ಬಗ್ಗೆ ಚರ್ಚಿಸಿದ ನಂತರ ರಜನಿಕಾಂತ್ ಈ ಘೋಷಣೆ ಮಾಡಿದರು.

"ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ನನಗಿಲ್ಲ" ಎಂದು 70 ವರ್ಷದ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.

ರಜಿನಿ ಮಕ್ಕಳ್  ಮಂದಿರವನ್ನು ವಿಸರ್ಜಿಸಲಾಗುವುದು ಹಾಗೂ  ಇದನ್ನು  ರಜನಿಕಾಂತ್ ಅಭಿಮಾನಿಗಳ ಕಲ್ಯಾಣ ವೇದಿಕೆಯಾಗಿ ಮಾರ್ಪಡಿಸಲಾಗುವುದು ಎಂದರು.

ಸಭೆಗೆ ಮುಂಚಿತವಾಗಿ, ರಜನಿಕಾಂತ್ ಸುದ್ದಿಗಾರರಿಗೆ ತಮ್ಮ ರಾಜಕೀಯ ವೇದಿಕೆಯ ಭವಿಷ್ಯ ಹಾಗೂ  ತನ್ನ ರಾಜಕೀಯ ಪ್ರವೇಶದ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದರು.

"ನಾನು ರಾಜಕೀಯಕ್ಕೆ ಪ್ರವೇಶಿಸಬೇಕೇ ಅಥವಾ ಬೇಡವೇ ಎಂದು ಚರ್ಚಿಸುತ್ತೇನೆ" ಎಂದು ನಟ  ಸಭೆಗೆ ಮೊದಲು ಹೇಳಿದ್ದರು.

"ನಾನು ಭವಿಷ್ಯದಲ್ಲಿ ರಾಜಕೀಯಕ್ಕೆ ಬರುತ್ತಿದ್ದೇನೆ ಅಥವಾ  ಇಲ್ಲವೇ ಎಂಬ ಪ್ರಶ್ನೆ ಇದೆ. ಇವೆಲ್ಲವನ್ನೂ ಚರ್ಚಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News