ಮಾಟ ಮಂತ್ರ ಶಂಕೆ: ಬುಡಕಟ್ಟು ಮಹಿಳೆಯ ಶಿರಚ್ಛೇದ

Update: 2021-07-25 05:19 GMT

ಬರಿಪಾದ: ಒಡಿಶಾದ ಮಯೂರಗಂಜ್ ಜಿಲ್ಲೆಯಲ್ಲಿ ಮಾಟಮಂತ್ರ ಮಾಡುತ್ತಿದ್ದ ಶಂಕೆಯಿಂದ ಬುಡಕಟ್ಟು ಮಹಿಳೆಯೊಬ್ಬರನ್ನು ಶಿರಚ್ಛೇದ ಮಾಡಿದ ಘಟನೆ ವರದಿಯಾಗಿದೆ. ಬಂಗ್ರಿಪೋಶಿ ಠಾಣೆಯ ಪುರುನಪಾಣಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕುನಿ ಜೆರಾಯ್ (55) ಎಂಬ ಮಹಿಳೆಯ ತಲೆಬರುಡೆ ಮತ್ತು ಅಸ್ಥಿಪಂಜರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಇನ್‌ಸ್ಪೆಕ್ಟರ್ ಸಂಜಯ್ ಕುಮಾರ್ ಪರೀದಾ ಹೇಳಿದ್ದಾರೆ.

ಈ ಸಂಬಂಧ ಜಮೀರಾ ಸಿಂಗ್ (33) ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಶನಿವಾರ ಪೊಲೀಸರು ಆರೋಪಿಯನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಿದಾಗ, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ವಿವರಿಸಿದ್ದಾರೆ.

ಜೆರಾಯ್ ಮಾಟ ಮಾಡಿದ್ದೇ ತನ್ನ ಮಗನ ಸಾವಿಗೆ ಕಾರಣ ಎಂಬ ಶಂಕೆಯಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಜುಲೈ 9ರಂದು ಕೊಡಲಿಯಿಂದ ಮಹಿಳೆಯ ಶಿರಚ್ಛೇದ ಮಾಡಿದ ಸಿಂಗ್ ದೇಹವನ್ನು ಗ್ರಾಮದ ಪಕ್ಕ ಎಸೆದಿದ್ದ. ಜೆರಾಯ್ ನಾಪತ್ತೆಯಾದ ಬಗ್ಗೆ ಕುಟುಂಬದವರು ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News