ಅಂಗರಕ್ಷಕನ ಸಾವು ಪ್ರಕರಣ: ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಜಾಮೀನು

Update: 2021-09-06 17:26 GMT

ಕೋಲ್ಕತಾ, ಸೆ. 6: ಅಂಗರಕ್ಷಕನ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಕೋಲ್ಕತ್ತಾ ಉಚ್ಚ ನ್ಯಾಯಾಲಯ ಸೋಮವಾರ ಮಧ್ಯಂತರ ಜಾಮೀನು ನೀಡಿದೆ. ಆದರೆ, ಅಂಗರಕ್ಷಕನ ಸಾವಿಗೆ ಸಂಬಂಧಿಸಿ 2018ರಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ಸೂಚಿಸಿದೆ. 

ಸಿಐಡಿ ಜಾರಿಗೊಳಿಸಿದ ಸಮನ್ಸ್ ಗೆ ಸಂಬಂಧಿಸಿ ಅಧಿಕಾರಿ ತತ್‍ಕ್ಷಣ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ. ತನ್ನ ಅನುಮತಿ ಇಲ್ಲದೆ ಅಧಿಕಾರಿ ಅವರನ್ನು ಬಂಧಿಸ ಕೂಡದು ಎಂದು ಕೂಡ ಅದು ಹೇಳಿದೆ. ಸುವೇಂದು ಅಧಿಕಾರಿಯ ಅಂಗರಕ್ಷಕ ಸುಬೊಬ್ರತ ಚಕ್ರವರ್ತಿ ಪುರ್ಬಾ ಮೇದಿನಿ ಪುರ ಜಿಲ್ಲೆಯ ಕಾಂತಿಯಲ್ಲಿರುವ ಅಧಿಕಾರಿ ಅವರ ಮನೆಯ ಹೊರಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಪಶ್ಚಿಮಬಂಗಾಳದ ಸಿಐಡಿ ಜುಲೈಯಲ್ಲಿ ಕೈಗೆತ್ತಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News