ಮಥುರಾ-ವೃಂದಾವನ್ 10 ಕಿ.ಮೀ. ಪ್ರದೇಶ ತೀರ್ಥಕ್ಷೇತ್ರ ಎಂದು ಘೋಷಿಸಿ ಮದ್ಯ-ಮಾಂಸ ನಿಷೇಧಿಸಿದ ಉತ್ತರ ಪ್ರದೇಶ ಸರಕಾರ

Update: 2021-09-10 16:02 GMT

ನಗರ ಪಾಲಿಕೆ: ಉತ್ತರ ಪ್ರದೇಶದ ಮಥುರಾ-ವೃಂದಾವನ್ ನ 10 ಕಿ.ಮೀ.  ಪ್ರದೇಶವನ್ನು ತೀರ್ಥಕ್ಷೇತ್ರ ಎಂದು ಘೋಷಿಸಿದ ಮುಖ್ಯಮಂತ್ರಿ ಆದಿತ್ಯನಾಥ್, ಅಲ್ಲಿ ಮಾಂಸ ಮತ್ತು ಮದ್ಯ ನಿಷೇದಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಿಸಿದ್ದಾರೆ.

ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾ-ವೃಂದಾವನ ಪ್ರದೇಶದ 10ಕಿ.ಮಿ ಪ್ರದೇಶವನ್ನು ತೀರ್ಥಕ್ಷೇತ್ರ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಘೋಷಿಸಿದ್ದಾರೆ.   ಈ ಪ್ರದೇಶದಲ್ಲಿ 22 ನಗರ ಪಾಲಿಕೆ ವಾರ್ಡ್‌ಗಳಿವೆ ಮತ್ತು ಈ ಎಲ್ಲಾ ವಾರ್ಡ್‌ಗಳನ್ನು ತೀರ್ಥಕ್ಷೇತ್ರವೆಂದು ಘೋಷಿಸಲಾಗಿದೆ ಎಂದು ANI ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News