ತಮಿಳುನಾಡು ರಾಜ್ಯಪಾಲರಾಗಿ ಆರ್.ಎನ್. ರವಿ ಪ್ರಮಾಣ
Update: 2021-09-18 17:51 GMT
ಚೆನ್ನೈ, ಸೆ. 18: ತಮಿಳುನಾಡಿನ ರಾಜ್ಯಪಾಲರಾಗಿ ರವೀಂದ್ರ ನಾರಾಯಣ ರವಿ ಅವರು ಶನಿವಾರ ಪ್ರಮಾಣ ವಚನ ಸ್ವೀರಿಸಿದ್ದಾರೆ.
ರವಿ ನಾರಾಯಣ ಅವರು 2019 ಜುಲೈಯಿಂದ ಸೆಪ್ಟಂಬರ್ ವರೆಗೆ ನಾಗಾ ಲ್ಯಾಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, 2015ರಿಂದ ನಾಗ ಶಾಂತಿ ಮಾತುಕತೆಯ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸಕ್ತ ಪಂಜಾಬ್ ರಾಜ್ಯಪಾಲರಾಗಿರುವ ಬನ್ವಾರಿಲಾಲ್ ಅವರ ಉತ್ತರಾಧಿಕಾರಿಯಾಗಿ ರವಿನಾರಾಯಣ ಅವರು ನೇಮಕರಾಗಿದ್ದಾರೆ.
ಚೆನ್ನೈಯ ರಾಜಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರವಿ ಅವರಿಗೆ ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಅವರು ಪ್ರಮಾಣ ವಚನ ಬೋಧಿಸಿದರು.