ಜಮ್ಮು ಕಾಶ್ಮೀರ ಬಿಜೆಪಿ ಮುಖಂಡರ ನಡುವಿನ ವಾಕ್ಸಮರದ ವೀಡಿಯೊ ವೈರಲ್

Update: 2021-09-26 05:13 GMT

ಶ್ರೀನಗರ: ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆಗಮಿಸುವ ಕೆಲ ಗಂಟೆಗಳ ಮುನ್ನ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಪಕ್ಷದ ಇಬ್ಬರು ಮುಖಂಡರ ನಡುವೆ ವಾಕ್ಸಮರ ನಡೆದ ಕುತೂಹಲಕಾರಿ ಪ್ರಸಂಗ ವರದಿಯಾಗಿದೆ.

ಬಿಜೆಪಿಯ ಜವಾಹರ್‌ನಗರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಕೆಲ ವರದಿಗಾರರು ಇದನ್ನು ದಾಖಲಿಸಿಕೊಂಡಿದ್ದು, ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿ ಮುಖಂಡರಾದ ಅಲಿ ಮೊಹ್ಮದ್ ಮತ್ತು ಮೊಹ್ಮದ್ ಅಶ್ರಫ್ ನಡುವೆ, ಕೇಂದ್ರ ಸಚಿವರ ಆಗಮನಕ್ಕೆ ಮುನ್ನ ವಾಗ್ವಾದ ಆರಂಭವಾಯಿತು ಎನ್ನಲಾಗಿದೆ.

ವಾಗ್ವಾದ ತೀವ್ರಗೊಂಡು ಇನ್ನೇನು ಪರಸ್ಪರರ ನಡುವೆ ಮುಷ್ಟಿಕಾಳಗ ನಡೆಯಬೇಕು ಎನ್ನುವಷ್ಟರಲ್ಲಿ ಸಭೆಯಲ್ಲಿ ಹಾಜರಿದ್ದ ಇತರ ಮುಖಂಡರು ತಡೆದರು ಎನ್ನುವುದು ವಿಡಿಯೊದಿಂದ ತಿಳಿದುಬರುತ್ತದೆ. ಸಭೆಯಲ್ಲಿ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಸೆರೆ ಹಿಡಿದಿದ್ದು, ಹಲವು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಶೇರ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News