ಕೋಲ್ಕತಾದ ಮತದಾರರ ಪಟ್ಟಿಯಲ್ಲಿ ಪ್ರಶಾಂತ್ ಕಿಶೋರ್ ಹೆಸರು ಸೇರ್ಪಡೆ

Update: 2021-09-26 06:33 GMT

ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯ ವಿಧಾನಸಭೆಗೆ ಪ್ರವೇಶಿಸಲು ಸ್ಪರ್ಧಿಸಲಿರುವ ಪಶ್ಚಿಮ ಬಂಗಾಳದ ನಿರ್ಣಾಯಕ ಭವಾನಿಪುರ ಉಪಚುನಾವಣೆಗೆ ಮುನ್ನ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್  ಭವಾನಿಪುರ ವಿಧಾನಸಭಾ ಕ್ಷೇತ್ರದ ಮತದಾರರಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

 ಕಿಶೋರ್ ಅವರು ಮೊದಲು ಬಿಹಾರದ ಸಸಾರಾಮ್ ಜಿಲ್ಲೆಯ ತಮ್ಮ ಸ್ವಗ್ರಾಮದಲ್ಲಿ ಮತದಾರರಾಗಿದ್ದರು.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಭರ್ಜರಿ ಪ್ರದರ್ಶನ ನೀಡಿ ಅಧಿಕಾರವನ್ನು ಉಳಿಸಿಕೊಳ್ಳಲು ಕಿಶೋರ್ ಚುನಾವಣಾ ರಣನೀತಿಯ ಮೂಲಕ ಸಹಾಯ ಮಾಡಿದ್ದರು.

ಅಸೆಂಬ್ಲಿ ಚುನಾವಣೆಗಳ ನಡುವೆ ಕೊಲ್ಕತ್ತಾದಿಂದ ಕಿಶೋರ್ ಅವರನ್ನು ಹೊರಹಾಕಲು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಲು ಪ್ರಯತ್ನಿಸಬಹುದು ಎಂಬ ಆತಂಕದ ದೃಷ್ಟಿಯಿಂದ ಅವರು ಮತದಾನದ ಸ್ಥಳವನ್ನು ಶಿಫ್ಟ್ ಮಾಡಿದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News