ಗುರುಗ್ರಾಮದ ವಿ.ವಿ. ಕ್ಯಾಂಪಸ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿಯ ಗುಂಡು ಹಾರಿಸಿ ಹತ್ಯೆ

Update: 2021-10-09 18:24 GMT

ಹೊಸದಿಲ್ಲಿ, ಅ. 9: ಗುರುಗ್ರಾಮದ ಶ್ರೀ ಗುರು ಗೋಬಿಂದ ಸಿಂಗ್ ಟ್ರೈಸೆಂಟಿನರಿ (ಎಸ್ಜಿಟಿ) ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿಯೋರ್ವನನ್ನು ಇನ್ನೋರ್ವ ವಿದ್ಯಾರ್ಥಿ ಗುಂಡು ಹಾರಿಸಿ ಹತ್ಯೆಗೈದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾರ್ಥಿ ಲಕ್ಕಿ ಎಂದು ಗುರುತಿಸಲಾಗಿದೆ. ಘಟನೆ ಸಂಭವಿಸಿದ ಕೂಡಲೇ ಆತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ವಿದ್ಯಾರ್ಥಿಯನ್ನು ಉತ್ತರಪ್ರದೇಶದ ಶ್ಯಾಮಿಲಿ ಜಿಲ್ಲೆಯ ನಿವಾಸಿ ವಿನೀತ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಗುರುಗಾಂವ್ ನ ಫಾರೂಕ್ ನಗರ ಪ್ರದೇಶದಲ್ಲಿರುವ ವಿಶ್ವವಿದ್ಯಾನಿಲಯದ ಆಯುರ್ವೇದಿಕ್ ಔಷಧ ಹಾಗೂ ಶಸ್ತ್ರಚಿಕಿತ್ಸೆ ಪದವಿಯ ನಾಲ್ಕನೇ ವರ್ಷದ ವಿದ್ಯಾರ್ಥಿ.

ಪ್ರೀತಿ ವಿಷಯದಲ್ಲಿ ವಿವಾದ ಉಂಟಾಗಿ ಘಟನೆ ನಡೆದಿದೆ ಎಂಬುದು ಪ್ರಾಥಮಿಕ ತಣಿಕೆಯಿಂದ ತಿಳಿದು ಬಂದಿದೆ ಎಂದು ಪಶ್ಚಿಮ ಗುರುಗ್ರಾಮದ ಪೊಲೀಸ್ ಉಪ ಅಧೀಕ್ಷಕ ದೀಪಕ್ ಶರಣ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News