ಉ.ಕ. ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಗೆ ಆಹ್ವಾನ

Update: 2021-10-11 15:10 GMT

ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಪ್ರವಾದಿ ಮುಹಮ್ಮದ್(ಸ) ರ ಜನ್ಮಾದಿನಾಚರಣೆ  ಮಿಲಾದುನ್ನಬಿ ಪ್ರಯುಕ್ತ ಅ.16ರಿಂದ 26ರ ವರೆಗೆ ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ ಎಂಬ ವಿಷಯದಲ್ಲಿ ಅಭಿಯಾನ ನಡೆಸುತ್ತಿದೆ. ಇದರ ಅಂಗವಾಗಿ ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ ಎಂಬ ವಿಷಯದಲ್ಲಿ ಸಾರ್ವಜನಿಕರಿಗಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅಭಿಯಾನದ ಸಂಚಾಲಕ ಮುಜಾಹಿದ್ ಮುಸ್ತಫಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ 5000, ದ್ವಿತೀಯಾ 3000, ತೃತೀಯ 2000 ಹಾಗೂ 1000 ರೂಗಳ ಮೂರು ಸಮಾಧಾನಕರ ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಗುವುದು.

ಪ್ರಬಂಧವು ಕನ್ನಡ ಭಾಷೆಯಲ್ಲಿ ನುಡಿ/ಬರಹ ತಂತ್ರಾಂಶದಲ್ಲಿ 14 ಸಂಖ್ಯೆ ಗಾತ್ರದ ಅಕ್ಷರದಲ್ಲಿ ಟೈಪಿಸಿ (ಎ4ಸೈಝಿನ 3ಪುಟಕ್ಕೆ ಮೀರದಂತೆ)ಅ.25ರೊಳಗೆ ತಲುಪುವಂತೆ ಸಂಚಾಲಕರು ಸೀರತ್ ಪ್ರಬಂಧ ಸ್ಪರ್ಧೆ, ದಾವತ್ ಸೆಂಟರ್ ಸುಲ್ತಾನ್ ಸ್ಟ್ರೀಟ್ ಭಟ್ಕಳ-581320 ಈ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ತಿಳಿಸಲಾಗಿದೆ. ಸಾಫ್ಟ್ ಪ್ರತಿಯನ್ನು yammarmanvi@gmail.com ಗೆ ಕಳುಹಿಸಿಕೊಡಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ 9886455416 ಗೆ ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News